ಬ್ರಹ್ಮಾವರ: ರೋಟರಿ ರೋಯಲ್ ಬ್ರಹ್ಮಾವರ, ನೆಲಮಂಗಲ ರೋಟರಿ ಕ್ಲಬ್ನ ಮಾಜಿ ಸಹಾಯಕ ಗವರ್ನರ್ ಮಂಜುನಾಥ್ ಪಾಟೀಲ್ ಅವರ ಸಹಕಾರದಲ್ಲಿ ಕರ್ಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಪಾಡಿಯಲ್ಲಿ ಗಾಳಿ ಮಳೆಗೆ ಹಾನಿಯಾದ 38 ಕುಟುಂಬಗಳಿಗೆ ತಲಾ 10 ಕೆ.ಜಿ. ಅಕ್ಕಿ, ಅವಶ್ಯಕ ಸಾಮಾಗ್ರಿ ಖರೀದಿಗೆ ಧನಸಹಾಯ ನೀಡಲಾಯಿತು.
ಪೇತ್ರಿಯ ಪಾರ್ವತಿ ರೈಸ್ ಮಿಲ್ ಮಾಲೀಕ ಕೃಷ್ಟ್ರಾಯ ಪಾಟೀಲ್, ರೋಟರಿ ರೊಯಲ್ ಅಧ್ಯಕ್ಷ ಗಣೇಶ ಎ.ಪೂಜಾರಿ, ಮಾಜಿ ಅಧ್ಯಕ್ಷ ಉಮೇಶ ನಾಯ್ಕ, ವಿಶ್ವನಾಥ ಶೆಟ್ಟಿ, ಜೈಕಿಶನ್ ಶೆಟ್ಟಿ, ಅಶೋಕ ಶೆಟ್ಟಿ, ಉಮಾಶಂಕರ ಶೆಟ್ಟಿ, ಕಾರ್ಯದರ್ಶಿ ತ್ರಿವಿಕ್ರಮ ಅಡಿಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.