ADVERTISEMENT

ಹೆಡ್‌ ಕಾನ್‌ಸ್ಟೆಬಲ್ ಸಾವು ಪ್ರಕರಣ: ಡೆತ್‌ನೋಟ್ ಪತ್ತೆ

​ಪ್ರಜಾವಾಣಿ ವಾರ್ತೆ
Published 1 ಮೇ 2022, 19:31 IST
Last Updated 1 ಮೇ 2022, 19:31 IST
ರಾಜೇಶ್ ಕುಂದರ್
ರಾಜೇಶ್ ಕುಂದರ್   

ಉಡುಪಿ: ಸಶಸ್ತ್ರ ಮೀಸಲು ಪಡೆಯ ಹೆಡ್‌ ಕಾನ್‌ಸ್ಟೆಬಲ್‌ ರಾಜೇಶ್ ಕುಂದರ್‌ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಅವರು ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ ನೋಟ್‌ ಶನಿವಾರ ಪತ್ತೆಯಾಗಿದೆ.

‘ಆದಿ ಉಡುಪಿ ಶಾಲೆಯಲ್ಲಿ ಕರ್ತವ್ಯ ನಿರತರಾಗಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದು ರಾಜೇಶ್ ಮೃತಪಟ್ಟಿದ್ದಾರೆ’ ಎಂದು ಪ್ರಕರಣ ದಾಖಲಾಗಿತ್ತು.

‘ನನ್ನ ಸಾವಿಗೆ ಗಂಗೊಳ್ಳಿ ಠಾಣೆಯ ಪಿಎಸ್‌ಐ ನಂಜಪ್ಪ ಹಾಗೂ ಡಿಎಆರ್‌ ಎಪಿಸಿಗಳಾದ ಉಮೇಶ್‌ ಮತ್ತು ಅಶ್ಫಾಕ್‌ ಕಾರಣ’ ಎಂಬ ಉಲ್ಲೇಖಡೆತ್‌ನೋಟ್‌ನಲ್ಲಿದೆ. ಆರೋಪಿಗಳ ವಿರುದ್ಧ 306 ಆರ್‌ಡಬ್ಲ್ಯು, 34 ಐಪಿಸಿ ಅಡಿ ಪ್ರಕರಣ ದಾಖಲಾಗಿದೆ. ರಾಜೇಶ್‌ ಜತೆ ಆದಿ ಉಡುಪಿ ಶಾಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿತಗೊಂಡಿದ್ದ ಉಡುಪಿ ಡಿಎಆರ್‌ ಘಟಕದ ಕಾನ್‌ಸ್ಟೆಬಲ್‌ ಗಣೇಶ್‌, ಡಿಎಆರ್‌ ಕಚೇರಿಯಲ್ಲಿ ಕಿಟ್‌ ಬ್ಯಾಗ್‌ನಿಂದ ಸಮವಸ್ತ್ರ, ಬೆಡ್‌ಶೀಟ್‌ ಹೊರ ತೆಗೆಯುವಾಗ ಡೆತ್‌ನೋಟ್‌ ಸಿಕ್ಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.