ADVERTISEMENT

ಹೆಬ್ಬೇರಿ ಉತ್ಸವ: ವೈಭವದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 13:37 IST
Last Updated 13 ಫೆಬ್ರುವರಿ 2024, 13:37 IST
ಹೆಬ್ರಿಯ ಅನಂತಪದ್ಮನಾಭ ಫ್ರೆಂಡ್ಸ್ ಆಶ್ರಯದಲ್ಲಿ ನಡೆಯುವ 4 ದಿನಗಳ ಹೆಬ್ಬೇರಿ ಉತ್ಸವದ ಮೆರವಣಿಗೆಯನ್ನು ಬಂಟರ ಸಂಘದ ಮುಂಭಾಗದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಮಹೇಶ್‌ ಟಿ.ಎಂ ಉದ್ಘಾಟಿಸಿದರು
ಹೆಬ್ರಿಯ ಅನಂತಪದ್ಮನಾಭ ಫ್ರೆಂಡ್ಸ್ ಆಶ್ರಯದಲ್ಲಿ ನಡೆಯುವ 4 ದಿನಗಳ ಹೆಬ್ಬೇರಿ ಉತ್ಸವದ ಮೆರವಣಿಗೆಯನ್ನು ಬಂಟರ ಸಂಘದ ಮುಂಭಾಗದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಮಹೇಶ್‌ ಟಿ.ಎಂ ಉದ್ಘಾಟಿಸಿದರು   

ಹೆಬ್ರಿ: ಇಲ್ಲಿನ ಅನಂತಪದ್ಮನಾಭ ಫ್ರೆಂಡ್ಸ್ ಆಶ್ರಯದಲ್ಲಿ ನಡೆಯುವ 4 ದಿನಗಳ ‘ಹೆಬ್ಬೇರಿ ಉತ್ಸವ’ದ ಮೆರವಣಿಗೆಯನ್ನು ಬಂಟರ ಸಂಘದ ಮುಂಭಾಗದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಮಹೇಶ್‌ ಟಿ.ಎಂ ಉದ್ಘಾಟಿಸಿದರು.

ನಾಡಿನ ವಿವಿಧ ಕಲಾ ತಂಡಗಳು, ಗಣ್ಯರು, ಹೆಬ್ರಿಯ ಗ್ರಾಮಸ್ಥರು ಮೆರವಣಿಗೆಗೆ ಕಳೆ ನೀಡಿದರು.

ಧಾರ್ಮಿಕ ಮುಖಂಡರಾದ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್. ಭಾಸ್ಕರ ಜೋಯಿಸ್, ಅನಂತಪದ್ಮನಾಭ ಫ್ರೆಂಡ್ಸ್ ಅಧ್ಯಕ್ಷ ಕರುಣಾಕರ ಶೇರಿಗಾರ್, ಉತ್ಸವದ ರೂವಾರಿ ಹೆಬ್ರಿ ಶೇಖರ್, ಹೆಬ್ರಿಯ ಟಿ.ಜಿ.ಆಚಾರ್‌, ಶಿಕ್ಷಣ ಇಲಾಖೆಯ ನಿತ್ಯಾನಂದ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಜನಾರ್ದನ್‌, ಸುಕೇಶ ಶೆಟ್ಟಿ, ಬೈಕಾಡಿ ಮಂಜುನಾಥ ರಾವ್‌ ಶಿವಪುರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.