ಕಾರ್ಕಳ: ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ನಮ್ಮ ನಾಡು ಒಕ್ಕೂಟದ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಹಂಚಿಕಟ್ಟೆ ಎನ್.ಎಸ್ ಅಕಾಡೆಮಿಯಲ್ಲಿ ಈಚೆಗೆ ನಡೆಯಿತು.
ಅಧ್ಯಕ್ಷರಾಗಿ ಶಾಕಿರ್ ಹುಸೈನ್, ಕಾರ್ಯದರ್ಶಿಯಾಗಿ ಶೇಕ್ ಶಬ್ಬೀರ್ ಮಿಯಾರು, ಉಪಾಧ್ಯಕ್ಷರಾಗಿ ಮುಸ್ತಾಫ್, ಮುಷ್ತಾಕ್ ಅಹಮದ್, ಮೊಹಮ್ಮದ್ ನವಾಜ್, ಗೌರವಾಧ್ಯಕ್ಷರಾಗಿ ಸೈಯದ್ ಹಸನ್, ಜೊತೆ ಕಾರ್ಯದರ್ಶಿಯಾಗಿ ರಹೀಂ ತೆಲ್ಲಾರು, ಪತ್ರಿಕಾ ಕಾರ್ಯದರ್ಶಿಯಾಗಿ ಕೆಂ.ಎಂ. ಖಲೀಲ್, ಸಂಘಟನಾ ಕಾರ್ಯದರ್ಶಿಯಾಗಿ ಮೌಲಾನ ಹಫೀಸ್ ಸಾಹೇಬ್, ಯುವ ಘಟಕದ ಸಂಯೋಜಕರಾಗಿ ಅಬ್ದುಲ್ಲ ಶೇಕ್ ಆದಂ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಅಬ್ದುಲ್ ಖಾದರ್ ಮುಡುಪಾಡಿ, ಮುನಾವರ್ ಅಜೆಕಾರು ಪಳ್ಳಿ, ಉಸ್ಮಾನ್ ಗುಲ್ವಾಡಿ, ವೀಕ್ಷಕರಾಗಿ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.