ಉಡುಪಿ: ಮಳೆ ಮತ್ತು ಕಡಲ ಅಬ್ಬರ ಹೆಚ್ಚಾಗಿರುವ ಕಾರಣ ಜಿಲ್ಲೆಯ ಬಹುತೇಕ ಬೀಚ್ಗಳಲ್ಲಿ ಸಮುದ್ರದ ಸಮೀಪಕ್ಕೆ ತೆರಳದಂತೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದರೂ ಮಲ್ಪೆಯ ಪಡುಕೆರೆಯಲ್ಲಿ ಕೆಲವು ಪ್ರವಾಸಿಗರು ಸಮುದ್ರದ ಸನಿಹಕ್ಕೆ ಹೋಗಿ ಸೆಲ್ಫಿ ತೆಗೆದುಕೊಂಡಿದ್ದಾರೆ.
ಪಡುಕೆರೆಯಲ್ಲಿ ಕಡಲಿನ ಅಬ್ಬರ ಜೋರಾಗಿದ್ದರೂ ಕೆಲವರು ಸಮುದ್ರ ತಡೆಗೋಡೆಯ ಮೇಲೆ ನಡೆದಾಡಿ ಸೆಲ್ಫಿ ತೆಗೆದುಕೊಂಡಿದ್ದಾರೆ.
ಬೀಚ್ ಗಾರ್ಡ್ ಇಲ್ಲದಿರುವ ಕಾರಣ ಪಡುಕೆರೆ ಬೀಚ್ನಲ್ಲಿ ಪ್ರವಾಸಿಗರ ದುಸ್ಸಾಹಸ ಮಿತಿ ಮೀರಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.