ADVERTISEMENT

ಸಾಣೂರು ಯುವಕ ಮಂಡಲಕ್ಕೆ ಸ್ವರ್ಣ ಸೇವಾ ಸಂಘ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 13:57 IST
Last Updated 28 ನವೆಂಬರ್ 2023, 13:57 IST
ಕಾರ್ಕಳ ಜೂನಿಯರ್ ಛೇಂಭರ್ ಇಂಟರ್‌ನ್ಯಾಷನಲ್ ಇದರ ಸ್ವರ್ಣ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ತಾಲ್ಲೂಕಿನ ಸಾಣೂರು ಯುವಕ ಮಂಡಲಕ್ಕೆ ಸ್ವರ್ಣ ಸೇವಾ ಸಂಘ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಕಾರ್ಕಳ ಜೂನಿಯರ್ ಛೇಂಭರ್ ಇಂಟರ್‌ನ್ಯಾಷನಲ್ ಇದರ ಸ್ವರ್ಣ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ತಾಲ್ಲೂಕಿನ ಸಾಣೂರು ಯುವಕ ಮಂಡಲಕ್ಕೆ ಸ್ವರ್ಣ ಸೇವಾ ಸಂಘ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಕಾರ್ಕಳ: 70 ವರ್ಷಗಳಿಂದ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸ್ವಚ್ಛತಾ ಕಾರ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇಯಾದ ಛಾಪು ಮೂಡಿಸಿ ರಾಜ್ಯದ ಗಮನ ಸೆಳೆದಿರುವ ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ‘ಸಾಣೂರು ಯುವಕ ಮಂಡಲ’ದ ಸಾಧನೆಗೆ ಕಾರ್ಕಳ ಜೂನಿಯರ್ ಛೇಂಭರ್ ಇಂಟರ್‌ನ್ಯಾಷನಲ್ ಇದರ ಸ್ವರ್ಣ ಜೇಸಿ ಸಪ್ತಾಹದ ಸಮಾರೋಪದಲ್ಲಿ ಸ್ವರ್ಣ ಸೇವಾ ಸಂಘ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಣೂರು ಯುವಕ ಮಂಡಲದ ಪರವಾಗಿ ಮಂಡಲದ ಅಧ್ಯಕ್ಷ ಪ್ರಸಾದ್ ಪೂಜಾರಿ ಪ್ರಶಸ್ತಿ ಸ್ವೀಕರಿಸಿದರು.

ಯುವಕ ಮಂಡಲದ ಮಾಜಿ ಅಧ್ಯಕ್ಷ ಜಗದೀಶ್ ಕುಮಾರ್, ಕಾರ್ಯದರ್ಶಿ ಮೋಹನ್ ಶೆಟ್ಟಿ, ಕೋಶಾಧಿಕಾರಿ ರಾಜೇಶ್ ಪೂಜಾರಿ, ಪದಾಧಿಕಾರಿಗಳಾದ ದಿನೇಶ್ ನಾಯಕ್, ಶುಭಕರ್ ಶೆಟ್ಟಿ, ರಮೇಶ್ ಪೂಜಾರಿ, ಸುನಿಲ್‌, ವಿಘ್ನೇಶ್ ರಾವ್, ಮಂಜುನಾಥ್ ರಾವ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.