ADVERTISEMENT

ಹೆಬ್ರಿ | ಸೀತಾನದಿಯಲ್ಲಿ ಮತ್ತೆ ಕಾಡಾನೆ ದಾಳಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 14:00 IST
Last Updated 22 ಜೂನ್ 2024, 14:00 IST
ಸೀತಾನದಿಯ ಹೊಸವಕ್ಲು ವನಜ ಶೆಟ್ಟಿ ಅವರ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಹಾನಿ ಮಾಡಿರುವುದು
ಸೀತಾನದಿಯ ಹೊಸವಕ್ಲು ವನಜ ಶೆಟ್ಟಿ ಅವರ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಹಾನಿ ಮಾಡಿರುವುದು   

ಹೆಬ್ರಿ: ತಾಲ್ಲೂಕಿನ ನಾಡ್ಪಾಲು ಗ್ರಾಮದ ಸೀತಾನದಿ ಹೊಸವಕ್ಲು ವನಜ ಶೆಟ್ಟಿ ಅವರ ತೋಟಕ್ಕೆ ಶನಿವಾರ ಕಾಡಾನೆ ದಾಳಿ ನಡೆಸಿದೆ.

ಕಾಡಾನೆ ತೋಟಕ್ಕೆ ನುಗ್ಗಿ ಬಾಳೆ, ತೆಂಗು, ಅಡಿಕೆ ಮರಗಳಿಗೆ ಹಾನಿ ಮಾಡಿದೆ. 3 ತಿಂಗಳಲ್ಲಿ ಹಲವು ಬಾರಿ ನಾಡ್ಪಾಲು ಗ್ರಾಮದ ಹಲವು ಕಡೆ ದಾಳಿ ನಡೆಸಿದೆ. ಈ ಬಗ್ಗೆ ಎರಡು ದಿನದ ಹಿಂದೆ ಸೀತಾನದಿಯಲ್ಲಿ ಕಾಡಾನೆ ದಾಳಿಯಿಂದ ರಕ್ಷಣೆ ಕೋರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT