ಕಾರವಾರ: ತಾಲ್ಲೂಕಿನ ಮಾಜಾಳಿಯ ಗ್ರಾಮ ದೇವರಾದ ರಾಮನಾಥ ದೇವರ ವಾರ್ಷಿಕ ಜಾತ್ರೆ ಮಹೋತ್ಸವಕ್ಕೆ ಗುರುವಾರ ಚಾಲನೆ ದೊರೆಯಿತು. ಬಿಸಿ ಗಾಳಿಯಿಂದ ಮೇಲಕ್ಕೆ ನೆಗೆಯುವ 'ಬಲೂನ್' (ವಾಫರ್) ಹಾರಿಬಿಡುವುದು ಜಾತ್ರೆಯ ವಿಶೇಷವಾಗಿದೆ.
ಆಶ್ವಿಜ ಮಾಸದ ಚತುರ್ಥಿ ದಿನದಂದು ಜಾತ್ರೆ ಆಚರಿಸಲಾಗುತ್ತದೆ. ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಳ್ಳುತ್ತಿದ್ದಂತೆ ಬಲೂನ್ ಹಾರಿಬಿಡಲಾಗುತ್ತದೆ. ಸಂಜೆ ಜಾತ್ರೆ ಸಮಾರೋಪಗೊಳ್ಳುತ್ತಿದ್ದಂತೆ ಇನ್ನೊಂದು ಬಲೂನ್ ಹಾರಿಸಲಾಗುತ್ತದೆ.
ಗುರುವಾರ ಜಾತ್ರೆ ಆರಂಭಗೊಳ್ಳುತ್ತಿದ್ದಂತೆ ನೂರಾರು ಭಕ್ತರು ಬಲೂನ್ ಹಾರಿಬಿಟ್ಟರು. 'ಹರ ಹರ ಮಹದೇವ' ಎಂಬ ಘೋಷಣೆ ಮೊಳಗಿಸಿದರು.
'ಗ್ರಾಮದಲ್ಲಿ ಉಂಟಾಗುವ ತೊಂದರೆಗಳ ನಿವಾರಣೆಗೆ ಬಲೂನ್ ಹಾರಿಸಲಾಗುತ್ತದೆ. ಕೆಲವು ತಾಸು ಗಾಳಿಯಲ್ಲಿ ಹಾರಾಡುವ ಬಲೂನ್ ನಂತರ ಸಮುದ್ರದಲ್ಲಿ ಬೀಳುತ್ತದೆ. ಬಲೂನ್ ಹಾರಿಬಿಟ್ಟ ಬಳಿಕ ಗ್ರಾಮಕ್ಕೆ ಎದುರಾದ ಕಷ್ಟ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ' ಎಂದು ಮಾಜಾಳಿ ಗ್ರಾಮಸ್ಥರು ಹೇಳುತ್ತಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.