ADVERTISEMENT

ಜೊಯಿಡಾ | ಪತ್ರಕರ್ತರ ಕಾರಿನಡಿ ನಾಡಬಾಂಬ್ ಸ್ಪೋಟ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 15:41 IST
Last Updated 2 ಜುಲೈ 2024, 15:41 IST
ಜೊಯಿಡಾ ತಾಲ್ಲೂಕಿನ ಹುಡಸಾ ಅರಣ್ಯ ಇಲಾಖೆಯ ಗೇಟ್ ಬಳಿ ಮಂಗಳವಾರ ಪತ್ರಕರ್ತರ ಕಾರಿನ  ಚಕ್ರಕ್ಕೆ ಸಿಲುಕಿ ಸ್ಪೋಟಗೊಂಡ ನಾಡಬಾಂಬ್
ಜೊಯಿಡಾ ತಾಲ್ಲೂಕಿನ ಹುಡಸಾ ಅರಣ್ಯ ಇಲಾಖೆಯ ಗೇಟ್ ಬಳಿ ಮಂಗಳವಾರ ಪತ್ರಕರ್ತರ ಕಾರಿನ  ಚಕ್ರಕ್ಕೆ ಸಿಲುಕಿ ಸ್ಪೋಟಗೊಂಡ ನಾಡಬಾಂಬ್   

ಜೊಯಿಡಾ: ತಾಲ್ಲೂಕಿನ ಹುಡಸಾ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ನಾಡಬಾಂಬ್ ಮಾದರಿಯ ಬಾಂಬ್ ವೊಂದು ಪತ್ರಕರ್ತರ ಕಾರಿನಡಿ ಸಿಕ್ಕಿ ಸ್ಫೋಟಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಪತ್ರಕರ್ತರಾದ ಸಂದೇಶ ದೇಸಾಯಿ ಹಾಗೂ ಹರೀಶ್ ಭಟ್ಟ , ಟಿ. ಕೆ.ದೇಸಾಯಿ  ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನ ಟೈಯರ್‌ ಕೆಳಗೆ ಈ ನಾಡಬಾಂಬ್ ಸಿಕ್ಕಿ ಸ್ಪೋಟಗೊಂಡಿದೆ. ಈ ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ. 

‘ಈ ನಾಡಬಾಂಬ್ ಮುಖ್ಯವಾಗಿ ಹಂದಿ ಸಾಯಿಸಲು ಬಳಸುತ್ತಾರೆ’ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಬಹಳಷ್ಟು ನಾಡಬಾಂಬ್ ತೆಗೆದುಕೊಂಡು ಹೋಗುವಾಗ ಬಿದ್ದಿದೆಯೇ ಅಥವಾ ಉದ್ದೇಶ ಪೂರ್ವಕವಾಗಿ ಇಡಲಾಗಿದೆಯೇ ಎಂಬುದು ತನಿಖೆಯ ಹಂತದಲ್ಲಿದೆ. 

ADVERTISEMENT

ತಾಲ್ಲೂಕಿನಲ್ಲಿ ನಾಡಬಾಂಬ್ ಬಳಕೆ ಹೆಚ್ಚಾಗುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎನ್ನುವ ಆಗ್ರಹ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.