ಹೊನ್ನಾವರ: ಇಲ್ಲಿನ ಪ್ರಭಾತನಗರದ ಕುಳಕೋಡ ಕ್ರಾಸ್ ಸಮೀಪ ಮಂಗಳವಾರ ರಾತ್ರಿ ಟಿಪ್ಪರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಜಲವಳ್ಳಿ ಕರಿಕುರ್ವದ ಹರೀಶ ಕೃಷ್ಣ ಮೇಸ್ತ (28) ಮೃತಪಟ್ಟವರು. ಟಿಪ್ಪರ್ ಚಾಲಕ ಸಾಲಿಕೇರಿಯ ಅಣ್ಣಪ್ಪ ನಾಗಪ್ಪ ಗೌಡ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.