ಕಾರವಾರ: ಹೊನ್ನಾವರ ತಾಲ್ಲೂಕಿನ ಚಂದಾವರ ಚೆಕ್ಪೋಸ್ಟ್ನಲ್ಲಿ ಚುನಾವಣೆ ಕರ್ತವ್ಯಸಲ್ಲಿದ್ದ ಕ್ಷಿಪ್ರಪಡೆ ಅಧಿಕಾರಿಗಳು ಶುಕ್ರವಾರ ನಸುಕಿನ ಜಾವ ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗದಿಂದ ಬಂದಿದ್ದ ಆಟೊದಲ್ಲಿ ಈ ಹಣವನ್ನು ತರಲಾಗುತ್ತಿತ್ತು. ಕುಮಟಾ ಕಡೆಗೆ ಹಣ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಲಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ದೊಡ್ಡ ಮೊತ್ತವನ್ನು ಆಟೊದಲ್ಲಿ ತಡರಾತ್ರಿ ಸಾಗಿಸುತ್ತಿರುವ ಬಗ್ಗೆ ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಆಟೊ ಚಾಲಕ ಶಿವಮೊಗ್ಗದ ಭರತ್ ಹಾಗೂ ಪ್ರಯಾಣಿಸುತ್ತಿದ್ದ ಕುಮಟಾದ ಕಾಗಾಲದ ರವಿ ಪಂಡಿತ್ ಎಂಬುವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಣವನ್ನು ಕುಮಟಾದ ಉಪಖಜಾನೆಗೆ ಸಾಗಿಸಲಾಗಿದೆ' ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.