ಕುಮಟಾ: ಬುಧವಾರ ನಿಧನರಾದ ಪಟ್ಟಣದ ಚಿತ್ರಿಗಿ ವಿಷ್ಣುತೀರ್ಥ ಸಮೀಪದ ನಿವಾಸಿಯಾಗಿದ್ದ ರುಕ್ಮಾಬಾಯಿ ಪ್ರಭು ಅವರ ಇಚ್ಛೆಯಂತೆ ಅವರ ಮೃತ ದೇಹವನ್ನು ಅವರ ಕುಟುಂಬದವರು ಕಾರವಾರ ವೈದ್ಯಕೀಯ ಕಾಲೇಜಿಗೆ ದಾನ ನೀಡಿದರು.
ದಿವಂಗತ ರುಕ್ಮಾಬಾಯಿ ಅವರ ಇಚ್ಛೆಯಂತೆ ಅವರ ಕುಟುಂಬ ಸದಸ್ಯರು ಅವರ ಮೃತ ದೇಹವನ್ನು ಕಾರವಾರ ವೈದ್ಯಕೀಯ ಕಾಲೇಜಿಗೆ ನೀಡುವ ಮೂಲಕ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ ಎಂದು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೃತರ ಪತಿ ದಯಾನಂದ ಪ್ರಭು, ಪುತ್ರ ಗಿರಿಧರ ಪ್ರಭು, ಪುತ್ರಿ ನಿರ್ಮಲಾ ಪ್ರಭು ಹಾಗೂ ಕುಟುಂಬ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.