ADVERTISEMENT

ದುಗ್ಗೂರು: ಚಿರತೆಗೆ ಆಕಳು ಬಲಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 15:35 IST
Last Updated 16 ಜನವರಿ 2024, 15:35 IST
ಹೊನ್ನಾವರ ತಾಲ್ಲೂಕಿನ ದುಗ್ಗೂರಿನಲ್ಲಿ ಸೋಮವಾರ ರಾತ್ರಿ ಚಿರತೆಯ ದಾಳಿಗೆ ತುತ್ತಾದ ಹಸು ಹಾಗೂ ಜಾಗವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಪರಿಶೀಲಿಸಿದರು.
ಹೊನ್ನಾವರ ತಾಲ್ಲೂಕಿನ ದುಗ್ಗೂರಿನಲ್ಲಿ ಸೋಮವಾರ ರಾತ್ರಿ ಚಿರತೆಯ ದಾಳಿಗೆ ತುತ್ತಾದ ಹಸು ಹಾಗೂ ಜಾಗವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಪರಿಶೀಲಿಸಿದರು.   

ಹೊನ್ನಾವರ: ತಾಲ್ಲೂಕಿನ ದುಗ್ಗೂರಿನ ಪಾಚಿಗಿಡ್ಡನಮನೆಯ ಚಂದ್ರಶೇಖರ ಹೆಗಡೆ ಎಂಬವರಿಗೆ ಸೇರಿದ ತೋಟದಲ್ಲಿ ಸೋಮವಾರ ಬೀರು ಗೌಡ ಎಂಬವರಿಗೆ ಸೇರಿದ ಆಕಳೊಂದರ ಮೇಲೆ ದಾಳಿ ಮಾಡಿರುವ ಚಿರತೆ ಆಕಳನ್ನು ಕೊಂದು ದೇಹವನ್ನು ಅರ್ಧಬಂರ್ಧ ತಿಂದು ಹಾಕಿದೆ.

ದುಗ್ಗೂರಿನಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ ಎರಡನೇ ಬಾರಿಗೆ ಚಿರತೆ ದಾಳಿ ಮಾಡಿರುವ ವರದಿಯಾಗಿದ್ದು ಘಟನೆ ಅಲ್ಲಿನ ಜನರ ನಿದ್ದೆಗೆಡಿಸಿದೆ.

ಎರಡು ವಾರಗಳ ಹಿಂದೆ ಇದೇ ಊರಿನಲ್ಲಿ ಕೊಟ್ಟಿಗೆಗೆ ನುಗ್ಗಿದ್ದ ಚಿರತೆ ಆಕಳ ಕರುವೊಂದನ್ನು ತಿಂದು ಹಾಕಿತ್ತು' ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ಉಪ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹಾಗೂ ಗಾಡರ್್ ಮುರ್ತುಜಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆ ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಘಟನಾ ಸ್ಥಳದಲ್ಲಿ ಬೋನ್ ಅಳವಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.