ADVERTISEMENT

ಉತ್ತರ ಕನ್ನಡ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಫೇಸ್‍ಬುಕ್ ಖಾತೆ: ದೂರು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2023, 15:36 IST
Last Updated 3 ಡಿಸೆಂಬರ್ 2023, 15:36 IST
<div class="paragraphs"><p> ನಕಲಿ ಖಾತೆ ಸಾಂದರ್ಭಿಕ&nbsp; ಚಿತ್ರ&nbsp;</p></div>

ನಕಲಿ ಖಾತೆ ಸಾಂದರ್ಭಿಕ  ಚಿತ್ರ 

   

ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ಸೃಷ್ಟಿಸಿ ಜನರಿಗೆ ವಂಚಿಸುವ ಪ್ರಯತ್ನ ನಡೆಯುತ್ತಿರುವುದಾಗಿ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರ ಭಾವಚಿತ್ರ ಇರುವ ‘ಡೆಪ್ಯುಟಿ ಕಮೀಷನರ್ ಆಫ್ ಉತ್ತರ ಕನ್ನಡ’ ಹೆಸರಿನ ನಕಲಿ ಖಾತೆ ಸೃಷ್ಟಿಸಿ ಅದರ ಮೂಲಕ ಸುರೇಶ್ ಖಾರ್ವಿ ಎಂಬುವವರಿಗೆ ವಂಚಿಸುವ ಪ್ರಯತ್ನ ನಡೆದಿದೆ. ಯಾರದ್ದೋ ಮನೆಯ ಪೀಠೋಪಕರಣದ ಚಿತ್ರವನ್ನು ಮೆಸೆಂಜರ್‌ನಲ್ಲಿ ಕಳಿಸಿ ಮಾರಾಟ ಮಾಡಲು ಮುಂಗಡ ಹಣ ನೀಡುವ ಬೇಡಿಕೆ ಇಡಲಾಗಿದೆ’ ಎಂದು ಜಿಲ್ಲಾಧಿಕಾರಿ ಆಪ್ತ ಸಹಾಯಕ ಜಗದೀಶ್ ಪೂಜಾರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಜಿಲ್ಲಾಧಿಕಾರಿ ಹೆಸರಿನಲ್ಲಿ ಈ ಮೊದಲು ನಕಲಿ ಖಾತೆ ಸೃಷ್ಟಿಸಲಾಗಿತ್ತು. ಈಗ ಇನ್ನೊಂದು ಬಾರಿ ಇಂತಹ ಕೃತ್ಯ ನಡೆದಿದೆ. ನಕಲಿ ಖಾತೆ ಸೃಷ್ಟಿಸುತ್ತಿರುವವರನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ’ ಎಂದು ಸಿ.ಇ.ಎನ್. ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.