ADVERTISEMENT

ಕಾರವಾರ: ಶೇ 10ರಷ್ಟು ಬಡ್ಡಿಯೊಂದಿಗೆ ವಿಮೆ ಮೊತ್ತ ನೀಡಲು ಆದೇಶ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 14:25 IST
Last Updated 14 ಜೂನ್ 2024, 14:25 IST
   

ಕಾರವಾರ: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಅಪಘಾತ ವಿಮೆಯ ₹15 ಲಕ್ಷ ಮೊತ್ತವನ್ನು ವಾರ್ಷಿಕ ಶೇ 10ರ ಬಡ್ಡಿಯೊಂದಿಗೆ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಹೊನ್ನಾವರದ ನರಸಿಂಹ ಸುಬ್ಬಯ್ಯ ಶೆಟ್ಟಿ ಅವರ ಮಕ್ಕಳಾದ ಧರ್ಮೇಂದ್ರ, ಲೋಕೇಶ್ ಹಾಗೂ ರೇಖಾ ತಮ್ಮ ತಂದೆ ನರಂಸಿಹ ಶೆಟ್ಟಿ ದ್ವಿಚಕ್ರ ವಾಹನದಲ್ಲಿ ಅಪಘಾತಗೊಂಡು ಹಲವು ತಿಂಗಳ ಚಿಕಿತ್ಸೆ ಪಡೆದು ಸಾವನ್ನಪ್ಪಿದ್ದು, ವಾಹನದ ವಿಮೆಯ ಪ್ರಕಾರ ವೈಯಕ್ತಿಕ ಅಪಘಾತ ವಿಮೆ ₹15 ಲಕ್ಷ  ಇದ್ದು, ಈ ಮೊತ್ತ ಪಾವತಿಸಲು ಯುನೈಟೆಡ್ ಇಂಡಿಯಾ ಇನ್ಸೂರನ್ಸ್ ಕಂಪನಿಗೆ ವಿನಂತಿಸಿದ್ದರು. ಕಂಪನಿ ವಿಮಾ ಮೊತ್ತ ನೀಡದಿದ್ದಾಗ ಮೃತರ ಮಕ್ಕಳು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.

ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ ಹಾಗೂ ಸದಸ್ಯೆ ನೈನಾ ಕಾಮಟೆ, ವಿಮಾ ಕಂಪನಿ ವಿರುದ್ಧ ಆದೇಶಿಸಿ, ವಿಮಾ ಮೊತ್ತ ₹15 ಲಕ್ಷ ಮೊತ್ತಕ್ಕೆ ವಾರ್ಷಿಕ ಶೇ 10ರ ಬಡ್ಡಿಯೊಂದಿಗೆ ಪಾವತಿಸಲು ಹಾಗೂ ದೂರುದಾರರಿಗೆ ಪರಿಹಾರವಾಗಿ ₹90 ಸಾವಿರ, ಖರ್ಚು ವೆಚ್ಚಕ್ಕಾಗಿ ₹10 ಸಾವಿರ ನೀಡುವಂತೆ ಆಯೋಗ ತನ್ನ ಆದೇಶದಲ್ಲಿ ಸೂಚಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.