ADVERTISEMENT

ಕುಮಟಾ: ಕಲ್ಲಿನಿಂದ ಜಜ್ಜಿ ಕಾರ್ಮಿಕನ ಕೊಲೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 7:27 IST
Last Updated 28 ಅಕ್ಟೋಬರ್ 2024, 7:27 IST
<div class="paragraphs"><p>ಕುಮಟಾ ಪಟ್ಟಣದಲ್ಲಿ ಕಾರ್ಮಿಕನ ಕೊಲೆ ನಡೆದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.</p></div>

ಕುಮಟಾ ಪಟ್ಟಣದಲ್ಲಿ ಕಾರ್ಮಿಕನ ಕೊಲೆ ನಡೆದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.

   

ಕುಮಟಾ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಕಟ್ಟಡ ಹಾಗೂ ಸಿಬ್ಬಂದಿ ವಸತಿ ಗೃಹ ನವೀಕರಣ ಕಾಮಗಾರಿ ನಡೆಸಲು ಬಂದಿದ್ದ ಮೂವರು ಕಾರ್ಮಿಕರ ನಡುವೆ ಸೋಮವಾರ ಉಂಟಾದ ಘರ್ಷಣೆಯಲ್ಲಿ ಓರ್ವ ಹತ್ಯೆಯಾಗಿದ್ದಾನೆ.

ಹುಬ್ಬಳ್ಳಿಯ ಆನಂದ ನಗರ ನಿವಾಸಿ ಇಮ್ತಿಯಾಜ್ ರಾಯಭಾಗಿ (34) ಕೊಲೆಯಾಗಿರುವ ವ್ಯಕ್ತಿ.

ADVERTISEMENT

ಮೃತ ವ್ಯಕ್ತಿಯ ಜತೆ ಇದ್ದ ಹುಬ್ಬಳ್ಳಿ ಆನಂದ ನಗರದ ಸಾದಿಕ್ (20) ಹಾಗೂ ಮುನಿಯಪ್ಪ (50) ಸೇರಿ ಕಲ್ಲಿನಿಂದ ಜಜ್ಜಿ ಕಾರ್ಮಿಕನ ಕೊಲೆ ಮಾಡಿದ್ದಾರೆ. ಇಬ್ಬರೂ ಆರೋಪಿಗಳು ಹುಬ್ಬಳ್ಳಿಗೆ ಪರಾರಿಯಾಗಿದ್ದು, ಅವರನ್ನು ಬಂಧಿಸಲಾಗುವುದು ಎಂದು ಸಿ.ಪಿ.ಐ ಯೋಗೇಶ್ ತಿಳಿಸಿದ್ದಾರೆ.

ನವೀಕರಣ ಕಾಮಗಾರಿ ನಡೆಸಲು ಬಂದ ನಾಲ್ವರು ಕಾಮಗಾರಿ ನಡೆಯುತ್ತಿದ್ದ ಒಂದು ವಸತಿ ಗೃಹದಲ್ಲಿ ವಾಸವಾಗಿದ್ದರು. ಘಟನೆ ನಡೆದಾಗ ವಸತಿ ಗೃಹದ ಇನ್ನೊಂದು ಕೊಣೆಯಲ್ಲಿ ಮಲಗಿದ್ದ ಇನ್ನೊಬ್ಬ ಕಾರ್ಮಿಕ ಮೊಯೀನುದ್ದಿನ್ ಎಂಬಾತ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಎಂ.ಜಗದೀಶ್ , ಭಟ್ಕಳ ಡಿಎಸ್ಪಿ ಮಹೇಶ್ ಕೆ.ಎಂ. ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.