ADVERTISEMENT

ಸಿದ್ದಾಪುರ: ಸಿಡಿಲು ಬಡಿದು 6 ಮಂದಿ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 15:31 IST
Last Updated 10 ಅಕ್ಟೋಬರ್ 2024, 15:31 IST
ಸಿದ್ದಾಪುರ ತಾಲ್ಲೂಕಿನ ಕರ್ಕಿಸವಲಿನಲ್ಲಿ ಸಿಡಿಲಿನ ಆಘಾತದಿಂದ ಅಸ್ವಸ್ಥರಾದವರನ್ನು ಎಂ.ಆರ್.ಕುಲಕರ್ಣಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ಮಾಡಿ ಸ್ವಾಂತನ ಹೇಳಿದರು.
ಸಿದ್ದಾಪುರ ತಾಲ್ಲೂಕಿನ ಕರ್ಕಿಸವಲಿನಲ್ಲಿ ಸಿಡಿಲಿನ ಆಘಾತದಿಂದ ಅಸ್ವಸ್ಥರಾದವರನ್ನು ಎಂ.ಆರ್.ಕುಲಕರ್ಣಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ಮಾಡಿ ಸ್ವಾಂತನ ಹೇಳಿದರು.   

ಸಿದ್ದಾಪುರ: ತಾಲ್ಲೂಕಿನ ಹಾರ್ಸಿಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಕಿಸವಲಿನಲ್ಲಿ ಬುಧವಾರ ಮಧ್ಯಾಹ್ನ ಸಿಡಿಲು ಬಡಿದು 6 ಮಂದಿ ಅಸ್ವಸ್ಥರಾಗಿದ್ದು ಚಿಕಿತ್ಸೆಗಾಗಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರ್ಕಿಸವಲ್ ಗ್ರಾಮದ ವಿದ್ಯಾ ಭಾಸ್ಕರ ಚನ್ನಯ್ಯ(14), ಸುನಂದ ತಿಮ್ಮ ಚನ್ನಯ್ಯ(50), ಸುನೀತಾ ಗಣಪತಿ ಚನ್ನಯ್ಯ(25), ವಿನಾಯಕ ಭಾಸ್ಕರ ಚನ್ನಯ್ಯ(18), ಪ್ರೇಮಾ ಭಾಸ್ಕರ ಚನ್ನಯ್ಯ(40), ವಿಹಾನ್ ಧನಂಜಯ ಚನ್ನಯ್ಯ (11 ತಿಂಗಳು) ಸಿಡಿಲಿನ ಆಘಾತಕ್ಕೆ ಅಸ್ವಸ್ಥರಾಗಿದ್ದು ಅವರನ್ನು ಕೂಡಲೇ ಕಂದಾಯ ಇಲಾಖೆಯ ಸಿಬ್ಬಂದಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.  ಮನೆಗೆ ಅಲ್ಪ ಹಾನಿಯಾಗಿದೆ.

ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.