ADVERTISEMENT

ಗೋಕರ್ಣ: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2024, 13:17 IST
Last Updated 11 ಮಾರ್ಚ್ 2024, 13:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗೋಕರ್ಣ: ಸಮೀಪದ ಕುಡ್ಲೆ ಬೀಚಿನಲ್ಲಿ ಭಾನುವಾರ ಈಜಲು ಸಮುದ್ರಕ್ಕಿಳಿದ ಬೆಂಗಳೂರು ಮೂಲದ ಮೂವರು ಯುವತಿಯರು ಅಲೆಯ ಸುಳಿಗೆ ಸಿಲುಕಿ ಮುಳುಗುತ್ತಿದ್ದಾಗ ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.

ಬೆಂಗಳೂರಿನ ಜಯನಗರದ ನಿವಾಸಿಗಳಾದ ಸ್ಮಿತಾ ರವಿಚಂದ್ರನ್ (23), ನಿಹಾರಿಕಾ ಗಿರಿ (22) ಮತ್ತು ಪವಿತ್ರಾ ಸುಂದರ (22) ಅಪಾಯದಿಂದ ಪಾರಾದವರು.

ಜೀವ ರಕ್ಷಕ ಸಿಬ್ಬಂದಿ ವೀನ್ ಅಂಬಿಗ, ಮಂಜುನಾಥ್ ಹರಿಕಂತ್ರ, ಕುಡ್ಲೆ ವಾಟರ್ ಸ್ಪೋರ್ಟ್ಸ್, ಮೈ ಸ್ಟಿಕ್ ಗೋಕರ್ಣದ  ಸಿಬ್ಬಂದಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.