ADVERTISEMENT

ಸಿದ್ದಾಪುರ | ರಸ್ತೆ ಕುಸಿತ: ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 14:42 IST
Last Updated 18 ಜುಲೈ 2024, 14:42 IST
ಸಿದ್ದಾಪುರ ತಾಲ್ಲೂಕಿನ ಹಸ್ರಗೋಡ ಪಂಚಾಯಿತಿ ವ್ಯಾಪ್ತಿಯ  ಗೌರಿಬಣ್ಣಿಗೆ ಊರಿನ ರಸ್ತೆಯ ಪಕ್ಕದ ಗುಡ್ಡ ಕುಸಿದಿರುವುದು
ಸಿದ್ದಾಪುರ ತಾಲ್ಲೂಕಿನ ಹಸ್ರಗೋಡ ಪಂಚಾಯಿತಿ ವ್ಯಾಪ್ತಿಯ  ಗೌರಿಬಣ್ಣಿಗೆ ಊರಿನ ರಸ್ತೆಯ ಪಕ್ಕದ ಗುಡ್ಡ ಕುಸಿದಿರುವುದು   

ಸಿದ್ದಾಪುರ: ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಸ್ರಗೋಡ ಪಂಚಾಯಿತಿ ವ್ಯಾಪ್ತಿಯ ಗೌರಿಬಣ್ಣಿಗೆ ಊರಿಗೆ ತೆರಳುವ ರಸ್ತೆ ಕುಸಿದಿದೆ.

ಊರಿನ ಎದುರು ಹರಿಯುವ ಹಳ್ಳದಲ್ಲಿ ನೆರೆಯುಂಟಾಗಿ ಎತ್ತರದ ಧರೆ ಜರಿದು ಊರಿನ ಮನೆಗಳ ಹತ್ತಿರ ಡಾಂಬರು ರಸ್ತೆ ಕುಸಿದಿದೆ. ಇದರಿಂದ ಊರಿನ ಜನ, ಜಾನುವಾರು ಓಡಾಡಲು ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸ್ಥಳೀಯ ಪಂಚಾಯಿತಿ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡು ಊರಿನ ರಸ್ತೆ ಉಳಿಸಿ ಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT