ಶಿರಸಿ (ಉತ್ತರಕನ್ನಡ ಜಿಲ್ಲೆ): ತಾಲ್ಲೂಕಿನ ಬದನಗೋಡ ಹಳ್ಳದಲ್ಲಿ ಆರು ಆಮೆಗಳನ್ನು ಹಿಡಿದು ಅಕ್ರಮ ಸಾಗಣೆ ಮಾಡಿದ್ದ ಆರೋಪದ ಮೇಲೆ ಸೊರಬ ತಾಲ್ಲೂಕಿನ ದ್ಯಾಮಣ್ಣ ಹಾಗೂ ಶಿರಸಿಯ ಹೆಬ್ಬತ್ತಿ ಗ್ರಾಮದ ಶ್ರೀಕಾಂತ ನಾಯ್ಕ ಎಂಬುವರನ್ನು ಗುರುವಾರ ಬನವಾಸಿ ಅರಣ್ಯ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ.
‘ಇಬ್ಬರೂ ಆರೋಪಿಗಳು ಬದನಗೋಡ ಬಳಿ ಆಮೆ ಹಿಡಿದು ಸೂರಣಗಿಗೆ ಸಾಗಿಸಿದ್ದರು. ಎರಡು ಆಮೆಗಳನ್ನು ಸಾಯಿಸಿ ಬೇಯಿಸಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.