ADVERTISEMENT

ಯಲ್ಲಾಪುರ | ಮೃತದೇಹ ಪತ್ತೆ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 13:14 IST
Last Updated 14 ಅಕ್ಟೋಬರ್ 2024, 13:14 IST

ಯಲ್ಲಾಪುರ: ತಾಲ್ಲೂಕಿನ ಮಳಲಗಾಂವ ಸಮೀಪದ ಬೇಡ್ತಿ ನದಿ ಪಕ್ಕದ ಕಾಡಿನಲ್ಲಿ ಪಟ್ಟಣದ ರವೀಂದ್ರನಗರದ ನಿವಾಸಿ, ಕೂಲಿಕಾರ್ಮಿಕ ಬಸವರಾಜ ಹನುಮಂತಪ್ಪ ಭೋವಿವಡ್ಡರ (40) ಅವರ ದೇಹ ಮೃತಪಟ್ಟ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ.

ಬಸವರಾಜ ಅ.10ರಂದು ಬೆಳಿಗ್ಗೆ ಕೃಷ್ಣಪ್ಪ ಲಮಾಣಿ ಮತ್ತು ಪರಶುರಾಮ ಸಿದ್ದಿ ಎಂಬುವವರ ಜೊತೆ ಕೆಲಸಕ್ಕೆ ಹೋಗಿದ್ದರು. ಮನೆಗೆ ಬಾರದ್ದರಿಂದ ಕಾಣೆಯಾದ ಬಗ್ಗೆ ದೂರು ನೀಡಲಾಗಿತ್ತು. ಸಾವಿನಲ್ಲಿ ಸಂಶಯವಿದೆ ಎಂದು ಅವರ ಪತ್ನಿ ಸೀತಾ ಬಸವರಾಜ ಭೋವಿವಡ್ಡರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ದೂರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT