ADVERTISEMENT

ಅಭಿವೃದ್ಧಿ, ರಕ್ಷಣೆಗೆ ಆದ್ಯತೆಯೇ ಗುರಿ: ಕುಮಾರ ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 4 ಮೇ 2024, 14:13 IST
Last Updated 4 ಮೇ 2024, 14:13 IST
ಸಿದ್ದಾಪುರ ಪಟ್ಟಣದ ಬಸವಣ್ಣ ದೇವಾಲಯದಿಂದ ರಾಜ ಮಾರ್ಗದ ಮೂಲಕ ರಾಮಕೃಷ್ಣ ಹೆಗಡೆ ವೃತ್ತದ ವರೆಗೆ ರೋಡ್ ಶೋ ನಡೆಸಿ ಕುಮಾರ ಬಂಗಾರಪ್ಪ ಮಾತನಾಡಿದರು
ಸಿದ್ದಾಪುರ ಪಟ್ಟಣದ ಬಸವಣ್ಣ ದೇವಾಲಯದಿಂದ ರಾಜ ಮಾರ್ಗದ ಮೂಲಕ ರಾಮಕೃಷ್ಣ ಹೆಗಡೆ ವೃತ್ತದ ವರೆಗೆ ರೋಡ್ ಶೋ ನಡೆಸಿ ಕುಮಾರ ಬಂಗಾರಪ್ಪ ಮಾತನಾಡಿದರು   

ಸಿದ್ದಾಪುರ: ದೇಶದ ಅಭಿವೃದ್ಧಿ ಮತ್ತು ರಕ್ಷಣೆಗೆ ಆದ್ಯತೆ ನೀಡುವ ಮೋದಿ ಸರ್ಕಾರವನ್ನು ಆಯ್ಕೆ ಮಾಡಲು ಹೊರಟಿದ್ದೇವೆಯೇ ವಿನಃ ಲೂಟಿ ಕೋರ, ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಅಲ್ಲ ಎಂದು ಮಾಜಿ ಶಾಸಕ ಕುಮಾರ ಬಂಗಾರಪ್ಪ ಹೇಳಿದರು.

ಪಟ್ಟಣದ ಬಸವಣ್ಣ ದೇವಾಲಯದಿಂದ ರಾಜ ಮಾರ್ಗದ ಮೂಲಕ ರಾಮಕೃಷ್ಣ ಹೆಗಡೆ ವೃತ್ತದ ವರೆಗೆ   ಶನಿವಾರ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರಕ್ಕೆ ತಮ್ಮ ಪ್ರಧಾನಿ ಅಭ್ಯರ್ಥಿಯನ್ನು ಇಂದಿನ ವರೆಗೂ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ದೇಶಕ್ಕಾಗಿ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಿ ಎಂದರು.

ADVERTISEMENT

ಪ್ರಮುಖರಾದ ಬಿಜೆಪಿ ರಾಜ್ಯಕಾರ್ಯಕಾರಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್, ಜೆಡಿಎಸ್ ಪ್ರಮುಖ ಉಪೇಂದ್ರ ಪೈ, ತಾಲ್ಲೂಕು ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ಎಂ.ಕೆ, ಪ್ರಸನ್ನ ಕೆಎಕೈ, ಎಸ್.ಕೆ.ಮೇಸ್ತಾ, ಅಣ್ಣಪ್ಪ ನಾಯ್ಕ, ತೋಟಪ್ಪ ನಾಯ್ಕ, ಸತೀಶ ಹೆಗಡೆ, ಅರ್ಜುನ ಕುಮಾರ, ಮಂಜುನಾಥ ಭಟ್ಟ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.