ADVERTISEMENT

ದಾಂಡೇಲಿ | ಯುವಜನೋತ್ಸವ: ಉತ್ತಮ ಸಾಧನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 12:51 IST
Last Updated 9 ಫೆಬ್ರುವರಿ 2024, 12:51 IST
ಕಾರವಾರದಲ್ಲಿ  ಈಚೆಗೆ ನಡೆದ ಯುವಜನೋತ್ಸವದಲ್ಲಿ ದಾಂಡೇಲಿ ಬಂಗೂರುನಗರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ಪ್ರಾರ್ಚಾಯ ಬಿ.ಎಲ್.ಗುಂಡೂರು ಹಾಗೂ ನಯನಾ ರೇವಣಕರ  ಪಾಲ್ಗೊಂಡಿದ್ದರು
ಕಾರವಾರದಲ್ಲಿ  ಈಚೆಗೆ ನಡೆದ ಯುವಜನೋತ್ಸವದಲ್ಲಿ ದಾಂಡೇಲಿ ಬಂಗೂರುನಗರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ಪ್ರಾರ್ಚಾಯ ಬಿ.ಎಲ್.ಗುಂಡೂರು ಹಾಗೂ ನಯನಾ ರೇವಣಕರ  ಪಾಲ್ಗೊಂಡಿದ್ದರು   

ದಾಂಡೇಲಿ: ಕಾರವಾರದ ಶಿವಾಜಿ ಕಾಲೇಜಿನಲ್ಲಿ ಈಚೆಗೆ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಯುವಜನೋತ್ಸವ ಸ್ಪರ್ಧೆಯಲ್ಲಿ ದಾಂಡೇಲಿ ಬಂಗೂರ ನಗರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಾದ ಧೃವ ಭಟ್ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ, ಸನಾ ದಳವಾಯಿ ಭಾಷಣದಲ್ಲಿ ಪ್ರಥಮ, ಪ್ರಶಾಂತ ಮಿಮಿಕ್ರಿಯಲ್ಲಿ ದ್ವಿತೀಯ, ಕಾರ್ತಿಕ ಮಠಪತಿ ಕ್ಲೇ ಮಾಡಲಿಂಗ್‌ನಲ್ಲಿ ದ್ವಿತೀಯ ಸ್ಥಾನ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ಮೈಸೂರಿನಲ್ಲಿ ನಡೆಯುವ ಅಂತರ ವಿಶ್ವವಿದ್ಯಾಲಯ ಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಲ್.ಗುಂಡೂರ, ಸಾಂಸೃತಿಕ ವಿಭಾಗದ ಸಂಯೋಜಕ ಡಾ.ನಯನಾ ರೇವಣಕರ, ಆಡಳಿತ ಮಂಡಳಿ, ಬೋಧಕ ಬೋಧಕೇತರ ಸಿಬ್ಬಂದಿ  ಅಭಿನಂದನೆ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.