ADVERTISEMENT

ಹೊಸಪೇಟೆ |ಚುನಾವಣಾ ವೆಚ್ಚ: ತರಬೇತಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 15:13 IST
Last Updated 29 ಮಾರ್ಚ್ 2024, 15:13 IST
ಸದಾಶಿವ ಪ್ರಭು ಬಿ.
ಸದಾಶಿವ ಪ್ರಭು ಬಿ.   

ಹೊಸಪೇಟೆ (ವಿಜಯನಗರ): ಚುನಾವಣೆ ಸಂದರ್ಭದಲ್ಲಿ ಸೂಕ್ತ ದಾಖಲೆಗಳಿಲ್ಲದ ಹಾಗೂ ಅಕ್ರಮವಾಗಿ ಸಾಗಿಸುವ ಹಣ ಜಪ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಸಾಮನ್ಯ ಕಾರ್ಯನಿರ್ವಹಣಾ ವ್ಯವಸ್ಥೆ (ಎಸ್‌ಒಪಿ) ಹಾಗೂ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ವಿವಿಧ ತಂಡಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ಶುಕ್ರವಾರ ಇಲ್ಲಿ ನಡೆಯಿತು.

ನಗದು ಜಪ್ತಿ ಮತ್ತು ಕುಂದುಕೊರತೆ ಸಮಿತಿಯ ಅಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ  ಪ್ರಭು ಬಿ. ಅವರ ಅಧ್ಯಕ್ಷತೆಯಲ್ಲಿ ಈ ತರಬೇತಿ ನಡೆಯಿತು.

‘ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಚುನಾವಣೆ ಕರ್ತವ್ಯವನ್ನು ನಿರ್ವಹಿಸಬೇಕು’ ಎಂದು ಸಿಇಒ ಸೂಚಿಸಿದರು.

ADVERTISEMENT

ಬಳ್ಳಾರಿ-09 (ಪ.ಪಂ) ಲೋಕಸಭಾ ಕ್ಷೇತ್ರದ, ಚುನಾವಣಾ ವೆಚ್ಚನಿಗಾ ಘಟಕದ ನೋಡಲ್ ಅಧಿಕಾರಿ ನಾಗರಾಜ್, ವಿಜಯನಗರ ಚುನಾವಣಾ ವೆಚ್ಚ ನೋಡಲ್ ಅಧಿಕಾರಿ ಸಿ.ಜಿ. ಶ್ರೀನಿವಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.