ADVERTISEMENT

ಹೊಸಪೇಟೆ: ಎರಡನೇ ದಿನವೂ ಹಂಪಿಯ ಸೊಬಗು ಸವಿದ ಹಣಕಾಸು ಆಯೋಗ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 7:41 IST
Last Updated 31 ಆಗಸ್ಟ್ 2024, 7:41 IST
<div class="paragraphs"><p>ಹಣಕಾಸು ಆಯೋಗದ  ನಿಯೋಗ </p></div>

ಹಣಕಾಸು ಆಯೋಗದ ನಿಯೋಗ

   

ಹೊಸಪೇಟೆ (ವಿಜಯನಗರ): ಕೇಂದ್ರ ಸರ್ಕಾರದ 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪನಗಡಿಯಾ, ಸದಸ್ಯರು, ನಿರ್ದೇಶಕರು ಮತ್ತು ಕಾರ್ಯದರ್ಶಿ ಅವರನ್ನು ಒಳಗೊಂಡ ನಿಯೋಗ ಶನಿವಾರ ಸಹ ಐತಿಹಾಸಿಕ ಹಂಪಿಗೆ ಭೇಟಿ ನೀಡಿ, ಸೌಂದರ್ಯ ಕಂಡು ಖುಷಿಗೊಂಡಿತು.

ಮಹಾನವಮಿ ದಿಬ್ಬ, ಆನೆಲಾಯ, ಕಮಲಮಹಲ್, ಹಜಾರರಾಮ ದೇವಸ್ಥಾನ ಸಹಿತ ಹಲವು ಐತಿಹಾಸಿಕ ಸ್ಥಳ ಕಂಡ ಅಧಿಕಾರಿಗಳು ಅಚ್ಚರಿಪಟ್ಟರು.

ADVERTISEMENT

ಶುಕ್ರವಾರ ರಾತ್ರಿ ನಿಯೋಗ ಕಮಲಾಪುರದ ಇವಾಲ್ವ್ ಬ್ಯಾಕ್ ರೆಸಾರ್ಟ್‌ನಲ್ಲಿ ತಂಗಿತ್ತು. ಸಂಜೆ ತೋರಣಗಲ್‌ಗೆ ತೆರಳಿ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಹಿಂದಿರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.