ADVERTISEMENT

ಬಿಜೆಪಿಗೆ ಟ್ರಿಬಲ್ ರಿಟರ್ನ್ ಗಿಫ್ಟ್ ಕೊಡುತ್ತೇವೆ: ನಾರಾ ಭರತ್ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 16:25 IST
Last Updated 5 ಅಕ್ಟೋಬರ್ 2024, 16:25 IST
ನಾರಾ ಭರತ್‌ ರೆಡ್ಡಿ
ನಾರಾ ಭರತ್‌ ರೆಡ್ಡಿ   

ಹೊಸಪೇಟೆ (ವಿಜಯನಗರ): ಸಂಡೂರು ಉಪಚುನಾವಣೆ ಗೆಲುವಿನ ಮೂಲಕ ಮೋದಿಗೆ ಗಿಫ್ಟ್ ನೀಡುವುದಾಗಿ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದರೆ, ಇದೇ ಚುನಾವಣೆ ಮೂಲಕ ನಾವು ಬಿಜೆಪಿಗೆ ಮೂರನೇ ರಿಟರ್ನ್ ಗಿಫ್ಟ್ ಕೊಡುತ್ತೇವೆ ಎಂದು ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಸವಾಲು ಹಾಕಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಳ್ಳಾರಿ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್, ಸಂಡೂರು ವಿಧಾನಸಭೆ ಉಪಚುನಾವಣೆಯಲ್ಲೂ ಗೆಲುವು ಸಾಧಿಸುತ್ತದೆ. ಈ ಮೂಲಕ ಬಿಜೆಪಿಗೆ ಟ್ರಿಬಲ್‌ ರಿಟರ್ನ್ ಗಿಫ್ಟ್ ಕೊಡುತ್ತೇವೆ ಎಂದರು.

‘ಪ್ರತಿಯೊಬ್ಬರಿಗೂ ತಮ್ಮ ಹುಟ್ಟೂರಿಗೆ ಬರಲು ಖುಷಿಯಿರುತ್ತದೆ. ಆದರೆ, ಅವರವರ ಶಕ್ತಿ, ತಾಕತ್ತು ಚುನಾವಣೆ ಮತ್ತಿತರೆ ಸಂದರ್ಭದಲ್ಲಿ ಗೊತ್ತಾಗುತ್ತದೆ. ಜನಾರ್ದನ ರೆಡ್ಡಿ ಅವರ ಬಳ್ಳಾರಿ ಪ್ರವೇಶದಿಂದ ಜಿಲ್ಲೆಯ ರಾಜಕಾರಣದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.