ಹೊಸಪೇಟೆ (ವಿಜಯನಗರ): ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳದ ಪ್ರಯುಕ್ತ ಹಾಗೂ ಸಿರಿಧಾನ್ಯಗಳ ಕುರಿತು ಜಾಗೃತಿ ಮೂಡಿಸಲು ಕೃಷಿ ಇಲಾಖೆಯಿಂದ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ `ಸಿರಿಧಾನ್ಯ ರೋಡ್ ಶೋ’ (ಸಿರಿಧಾನ್ಯ ನಡಿಗೆ) ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹಸಿರು ನಿಶಾನೆ ತೋರಿಸಿದರು.
ನಗರದ ಎ.ಪಿ.ಎಂ.ಸಿ ವೃತ್ತದಿಂದ ವಿಜಯನಗರ ಕಾಲೇಜು ಮೈದಾನದವರೆಗೆ ನಡೆದ ಸಿರಿಧಾನ್ಯ ನಡಿಗೆಯಲ್ಲಿ `ನಮ್ಮ ನಡಿಗೆ ಸಿರಿಧಾನ್ಯಗಳ ಕಡೆಗೆ, ಸಿರಿಧಾನ್ಯ ಸಿಂಗಾರ ಆರೋಗ್ಯ ಬಂಗಾರ, ಸಿರಿಧಾನ್ಯಗಳ ತಾಕತ್ತು ಸಕಲ ಪೌಷ್ಠಿಕಾಂಶಗಳ ಸಂಪತ್ತು, ಸಿರಿಧಾನ್ಯ ಬೆಳೆ ಇರಲಿ ಪ್ರೋತ್ಸಾಹ ಧನ ತರಲಿ, ಬರಗಾರದಲ್ಲೂ ಬಂಗಾರ ಸಿರಿಧಾನ್ಯ, ಸಿರಿಧಾನ್ಯ ಬಳಸಿರಿ ಆರೋಗ್ಯದಲ್ಲಿ ಸಿರಿವಂತರಾಗಿ, ಸಜ್ಜೆ ತಿಂದವರು ಉತ್ಸಾಹದ ಕಹಳೆ ಊದುವರು, ರಾಗಿ ತಿಂದವರು ರೋಗದಿಂದ ಮುಕ್ತರಾಗುವರು’ ಎಂಬ ಸಂದೇಶ ಫಲಕಗಳನ್ನು ಹಿಡಿದು ವಿಶೇಷ ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಸೇರಿದಂತೆ ಕೃಷಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡು,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.