ಕಾನಹೊಸಹಳ್ಳಿ(ವಿಜಯನಗರ): ಸಮೀಪದ ನಿಂಬಳಗೇರೆ ಅರಣ್ಯ ಪ್ರದೇಶದಲ್ಲಿ ಶನಿವಾರ ನಡೆದ ಮಹಿಳೆ ಕೊಲೆಗೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶನಿವಾರ ನಿಂಬಳಗೇರೆ ಗ್ರಾಮದ ಫಾತಿಮಾ(35) ಅವರು ಪತ್ನಿ ಇಬ್ರಾಹಿಂ ಅವರೊಂದಿಗೆ ಬೈಕ್ನಲ್ಲಿ ಬರುವಾಗ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.
ಘಟನೆ ಕುರಿತು ಮೃತಳ ಪತಿ ಇಬ್ರಾಹಿಂ ದೂರು ನೀಡಿದ್ದು, ‘ಬೈಕ್ನಲ್ಲಿ ಹೋಗುವಾಗ ಇರ್ಫಾನ್ , ಆನಂದ್ ಬೈಕ್ ಅಡ್ಡಗಟ್ಟಿ ನೀನು, ನಿನ್ನ ಗಂಡನೊಂದಿಗೆ ರಾಜಿಯಾಗಿದ್ದಿಯ ಎಂದು ನನ್ನ ಪತ್ನಿಗೆ ಚಾಕುವಿನಿಂದ ಚುಚ್ಚಿದಾಗ ಅವಳು ಕೆಳಗಡೆ ಬಿದ್ದಳು. ನಾನು ಭಯದಿಂದ ಸ್ವಲ್ಪ ದೂರ ಬಂದು ಹಿಂದೆ ನೋಡಿದಾಗ ಆನಂದ್ ಎಂಬಾತ ಅವಳನ್ನು ನೆಲಕ್ಕೆ ಬಿಳಿಸಿ, ಇರ್ಫಾನ್ ಚಾಕುವಿನಿಂದ ಚುಚ್ಚುತ್ತಿದ್ದ. ನಾನು ಭಯದಿಂದ ಬಂದು ನಮ್ಮವರನ್ನು ಕರೆದುಕೊಂಡು ಹೋಗಿ ನೋಡಿದಾಗ ನನ್ನ ಹೆಂಡತಿ ಮೃತಪಟ್ಟಿದ್ದಳು’ ಎಂದು ಹೇಳಿದ್ದಾರೆ. ಅದೇ ಗ್ರಾಮದ ಇರ್ಫಾನ್, ಆನಂದ್ ಎಂಬುವವರನ್ನು ಬಂಧಿಸಿರುವ ಕಾನಹೊಸಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.