ವಿಜಯಪುರ: ವಿಜಯಪುರ, ಮುಧೋಳ ಮತ್ತು ಜಮಖಂಡಿ ನಗರದಲ್ಲಿ ಬಹಳ ದಿನಗಳಿಂದ ಬೈಕ್, ಮೊಬೈಲ್ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಿಜಯಪುರ ನಗರ ಪೊಲೀಸರು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುಧೋಳ ತಾಲ್ಲೂಕಿನ ಚಿಂಚಗಂಡಿಯ ಸುನೀಲ ಗಡ್ಡಿ(31), ವಿಜಯಪುರ ನಗರದ ಜೆ.ಎಂ.ರಸ್ತೆಯ ಕೆ.ಎಚ್.ಬಿ ಕಾಲೊನಿಯ ಮೊಶಿನ್ ಕಲಾದಗಿ(24)ಮತ್ತು ಸದ್ಧಾಂ ಮುತವಲ್ಲಿ(20) ಬಂಧಿತ ಆರೋಪಿಗಳಾಗಿದ್ದಾರೆ ಎಂದರು.
ಆರೋಪಿಗಳ ಬಳಿಯಿಂದ ಅಂದಾಜು ₹15.60 ಲಕ್ಷ ಮೌಲ್ಯದ 26 ಬೈಕ್ಗಳನ್ನು ಹಾಗೂ ಅಂದಾಜು ₹2.90 ಲಕ್ಷ ಮೌಲ್ಯದ 29 ಮೊಬೈಲ್ ಸೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.