ತಾಳಿಕೋಟೆ: ಇಲ್ಲಿನ ದೇವರ ಹುಲಗಬಾಳ ಸಮೀಪ ಕಬ್ಬಿನ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.
ತಾಳಿಕೋಟೆ ತಾಲ್ಲೂಕಿನ ತುಂಬಗಿಯವರಾದ ಮಹಿಬೂಬಸಾಬ ಹುಸೇನಸಾಬ ನದಾಫ (27) ಹಾಗೂ ಹುಸೇನಸಾಬ ರಾಜೇಸಾಬ ಇನಾಮದಾರ (26) ಮೃತರು. ಇವರು ಮುದ್ದೇಬಿಹಾಳದಿಂದ ತಾಳಿಕೋಟೆಯತ್ತ ಬರುತ್ತಿದ್ದರು.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.