ದೇವರಹಿಪ್ಪರಗಿ: ಪಟ್ಟಣದಲ್ಲಿ ಶನಿವಾರ ಸಂಜೆ ಬಿರುಸಾಗಿಯೇ ಆರಂಭಗೊಂಡ ಮಳೆ ಕೇವಲ 10 ನಿಮಿಷ ಸುರಿದರೂ ಬೇಸಿಗೆಯ ಬಿರುಬಿಸಿಲಿನ ತಾಪಕ್ಕೆ ತಣ್ಣನೆಯ ಹಿತ ನೀಡಿತು.
ಬರ ಮತ್ತು ಬೇಸಿಗೆಯಿಂದ ಕಾದು ಕಾವಲಿಯಂತಾಗಿದ್ದ ವಾತಾವರಣ ಮಳೆಗೆ ತಂಪಾಯಿತು. ಬಿಸಿಲಿನ ಪ್ರಖರತೆ ಹಾಗೂ ತಾಪಕ್ಕೆ ಬಸವಳಿದ ಜನತೆಗೆ ಸಂಜೆ ಮಳೆ ಮುದನೀಡಿತು. ಗುಡುಗು, ಮಿಂಚು, ಗಾಳಿಯಿಲ್ಲದೇ ಮಳೆಹನಿಗಳು ಇಳೆಗೆ ಇಳಿಯುತ್ತಿದ್ದಂತೆಯೇ ಮಣ್ಣಿನ ವಾಸನೆ ಮನಗಳಿಗೆ ಮುದನೀಡಿ ಹಿತವೇನಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.