ADVERTISEMENT

ನಿವೃತ್ತ ಶಿಕ್ಷಕನಿಗೆ ಅದ್ದೂರಿ ಮೆರವಣಿಗೆ 

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 16:28 IST
Last Updated 24 ಜುಲೈ 2024, 16:28 IST
ಸಿಂದಗಿ ತಾಲ್ಲೂಕಿನ ನಾಗಾವಿ ಬಿ.ಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಡಿ.ಬಿ. ಬೀರಪ್ಪಗೋಳ ಅವರನ್ನು ಹಳೆಯ ವಿದ್ಯಾರ್ಥಿಗಳು ಮೆರವಣಿಗೆ ಮಾಡಿದರು
ಸಿಂದಗಿ ತಾಲ್ಲೂಕಿನ ನಾಗಾವಿ ಬಿ.ಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಡಿ.ಬಿ. ಬೀರಪ್ಪಗೋಳ ಅವರನ್ನು ಹಳೆಯ ವಿದ್ಯಾರ್ಥಿಗಳು ಮೆರವಣಿಗೆ ಮಾಡಿದರು   

ಸಿಂದಗಿ: ತಾಲ್ಲೂಕಿನ ನಾಗಾವಿ ಬಿ.ಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಡಿ.ಬಿ. ಬೀರಪ್ಪಗೋಳ ಅವರನ್ನು ಹಳೆಯ ವಿದ್ಯಾರ್ಥಿಗಳು ಬುಧವಾರ ಅದ್ದೂರಿ ಮೆರವಣಿಗೆ ಮಾಡಿದರು.

ಗ್ರಾಮ ದೇವತೆ ಮಲ್ಲಿಕಾರ್ಜುನ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಗ್ರಾಮದಲ್ಲಿ ಸಂಚರಿಸಿ ಶಾಲಾ ಆವರಣ ತಲುಪಿತು.

ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಡಿ.ಬಿ.ಬೀರಪ್ಪಗೋಳ ಮಾತನಾಡಿ, ‘ನನ್ನ ಸಂಪತ್ತೆ ವಿದ್ಯಾರ್ಥಿ ಬಳಗ, ಅವರೆಲ್ಲ ನನಗೆ ಅದ್ದೂರಿ ಮೆರವಣಿಗೆ ಮಾಡಿ ಬೀಳ್ಕೊಟ್ಟಿರುವುದು ಗುರು-ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ’ ಎಂದರು.

ADVERTISEMENT

ಮುಖ್ಯ ಶಿಕ್ಷಕ ಪಿ.ಎನ್. ಚವ್ಹಾಣ, ಶಿಕ್ಷಕರಾದ ಸಂತೋಷ ಅಮರಗೊಂಡ, ಎನ್.ಎಂ.ಆಳಂದ, ಎಚ್.ಡಿ. ಮಸೂತಿ, ಆರ್.ಎಚ್.ಬಿರಾದಾರ, ಚಂದ್ರಕಾಂತ ಕಲ್ಲೂರ, ಬಿ.ಎಂ.ಮೂಲಿ ಹಾಗೂ ಗೊಲ್ಲಾಳಪ್ಪಗೌಡ ಬಿರಾದಾರ, ವಕೀಲ ಡಾ.ಸೋಮನಗೌಡ ಪಾಟೀಲ, ಹಳೆಯ ವಿದ್ಯಾರ್ಥಿಗಳಾದ ಸಿದ್ದನಗೌಡ ಬಿರಾದಾರ, ಸಲೀಂ ಮಂದೇವಾಲಿ, ಮುತ್ತುರಾಜ ಪೂಜಾರಿ, ಮಹಿಬೂಬ ಓಲೇಕಾರ, ಶಹಜಹಾನ ಗೋಲಗೇರಿ, ಪ್ರಕಾಶ ಬಿರಾದಾರ, ಶಹಾಬುದ್ದೀನ ಬುಕ್ಕದ, ಪರುಶರಾಮ ಮಾದರ, ಸುಮಂಗಲಾ ಬೀರಪ್ಪಗೋಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.