ವಿಜಯಪುರ: ನಗರದ ವಸತಿಗೃಹದಲ್ಲಿ 2023ರ ಮಾರ್ಚ್ನಲ್ಲಿ ನಡೆದಿದ್ದ ಮೈಸೂರಿನ ತಾಯಿ–ಮಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
‘ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಜ್ಯೋತಿ ಡಿ.ಎಸ್ ಮತ್ತು ಆಕೆಯ ಮಗ ರೋಹನ್ ಎಂಬುವರು ಕೊಲೆಯಾದವರು. ವಿಜಯಪುರದದ ಸಾಯಿ ಪಾರ್ಕ್ ನಿವಾಸಿ ಸಾಗರ ಲಮಾಣಿ (29) ಮತ್ತು ಆತನ ಸ್ನೇಹಿತ ಲಕ್ಷ್ಮಿಕಾಂತ ಕುಂಬಾರ(29) ಕೊಲೆ ಆರೋಪಿಗಳು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಜ್ಯೋತಿ ಡಿ.ಎಸ್ ಮತ್ತು ಸಾಗರ ಲಮಾಣಿ ಇಬ್ಬರೂ ಫೇಸ್ಬುಕ್ ಮೂಲಕ ಪರಿಚಿತರಾಗಿದ್ದರು. ಆಕೆಯ ಮೇಲೆ ಅನುಮಾನಪಟ್ಟು ವಿಜಯಪುರಕ್ಕೆ ಕರೆಯಿಸಿಕೊಂಡು, ವಸತಿಗೃಹದಲ್ಲಿ ಉಳಿಸಿದ. ನಂತರ ಲಕ್ಷ್ಮಿಕಾಂತ ಜೊತೆ ಸೇರಿ ತಾಯಿ ಮತ್ತು ಮಗನ ಕತ್ತು ಹಿಸುಕಿ ಕೊಲೆ ಮಾಡಿದ. ಇಬ್ಬರ ಶವಗಳನ್ನು ಕಾರಿನಲ್ಲಿ ಒಯ್ದು ತಿಕೋಟಾ ತಾಲ್ಲೂಕಿನ ಸಿದ್ಧಾಪುರ ಗ್ರಾಮದ ಹೊಲವೊಂದರ ಬಾವಿಯಲ್ಲಿ ಎಸೆದು ಹೋಗಿದ್ದರು. ವರ್ಷದ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.