ವಿಜಯಪುರ: ಕನ್ನಡ ಪುಸ್ತಕ ಪರಿಷತ್ತು ವಿಜಯಪುರ ಕೊಡುವ ರಾಜ್ಯ ಮಟ್ಟದ ‘ಡಾ.ತೋಂಟದ ಸಿದ್ಧಲಿಂಗಶ್ರೀ’ ಪುಸ್ತಕ ಪ್ರಶಸ್ತಿಗೆ 2023ರಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಗಳು ತಲಾ ₹10,000 ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿದೆ.
ಸಂಪಾದನೆ, ಪಿ.ಎಚ್.ಡಿ., ಸ್ಮರಣ ಸಂಚಿಕೆ ಹೊರತು ಪಡಿಸಿ ಎಲ್ಲ ಪ್ರಕಾರದ ಸಾಹಿತ್ಯ ಕೃತಿಗಳನ್ನು ಕಳುಹಿಸಬಹುದು. ಲೇಖಕರು ತಮ್ಮ ಕೃತಿಯ ಎರಡು ಪ್ರತಿಗಳನ್ನು ಆಗಸ್ಟ್ 20 ರೊಳಗೆ ಶಂಕರ ಬೈಚಬಾಳ ‘ವಚನ’ ರಾಜಾಜಿನಗರ, ವಿಜಯಪುರ-586109, ಮೊ. 9448751980, 9740560993 ಸಲ್ಲಿಸಬಹುದು ಎಂದು ಕನ್ನಡ ಪುಸ್ತಕ ಪರಿಷತ್ತಿನ ಸಂಚಾಲಕ ಮೋಹನ ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.