ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಈಚೆಗೆ ನಡೆದ ಅಖಿಲ ಭಾರತ ಮಟ್ಟದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಬೈಠಕ್ನಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ ಎಂದು ಹುಬ್ಬಳ್ಳಿ ಮಹಾನಗರ ಕಾರ್ಯದರ್ಶಿ ರಮೇಶ ಕದಂ ತಿಳಿಸಿದ್ದಾರೆ.
ಬೆಂಗಳೂರು ಕ್ಷೇತ್ರದ ಧರ್ಮಪ್ರಸಾರ ಪ್ರಮುಖರಾಗಿ ಸೂರ್ಯನಾರಾಯಣ, ಕರ್ನಾಟಕ ಉತ್ತರ ಪ್ರಾಂತ ಮಾರ್ಗದರ್ಶನ ಮಂಡಳಿ ಸದಸ್ಯರಾಗಿ ಡಾ.ರಾಮನಗೌಡರ ಧಾರವಾಡ, ಪ್ರಾಂತ ಅಧ್ಯಕ್ಷರಾಗಿ ಕಲಬುರಗಿಯ ಲಿಂಗರಾಜಪ್ಪ ಅಪ್ಪ, ಪ್ರಾಂತ ಉಪಾಧ್ಯಕ್ಷರಾಗಿ ಹುಬ್ಬಳ್ಳಿಯ ಕೆ.ಗೋವರ್ಧನ, ಪ್ರಾಂತ ಕಾರ್ಯದರ್ಶಿಯಾಗಿ ಸೇಡಂನ ಶಿವಕುಮಾರ ಬೋಳಶೆಟ್ಟಿ ಅವರನ್ನು ನೇಮಕಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.