ADVERTISEMENT

ಕೃಷ್ಣಾನದಿಗೆ 11 ಸಾವಿರ ಕ್ಯುಸೆಕ್ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 14:19 IST
Last Updated 24 ಸೆಪ್ಟೆಂಬರ್ 2024, 14:19 IST
ಚಿತ್ರ24ಎನ್ಆರ್ಪಿ02 ನಾರಾಯಣಪುರ ಬಸವಸಾಗರ ಜಲಾಶಯದ 2 ಕ್ರಸ್ಟ್ ಗೇಟಗಳಿಂದ ನೀರು ಹರಿಯುವ  ದೃಶ್ಯ.
ಚಿತ್ರ24ಎನ್ಆರ್ಪಿ02 ನಾರಾಯಣಪುರ ಬಸವಸಾಗರ ಜಲಾಶಯದ 2 ಕ್ರಸ್ಟ್ ಗೇಟಗಳಿಂದ ನೀರು ಹರಿಯುವ  ದೃಶ್ಯ.   

ನಾರಾಯಣಪುರ: ಬಸವಸಾಗರ ಜಲಾಶಯಕ್ಕೆ ಮಂಗಳವಾರ ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದಿಂದ 15 ಸಾವಿರ ಕ್ಯುಸೆಕ್ ನೀರು ಬರುತ್ತಿದ್ದು ಬಸವಸಾಗರ ಜಲಾಶಯದ 2 ಕ್ರಸ್ಟ್‌ ಗೇಟ್ ತೆರೆದು 11 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ.

ಪಶ್ಚಿಮಘಟ್ಟ ಜಲಾನಯನ ಪ್ರದೇಶದಲ್ಲಿ ಮಳೆ ಆಗುತ್ತಿರುವುದರಿಂದ ಬಸವಸಾಗರದ ಒಳಹರಿವು ಗಮನಿಸಿ ಕೃಷ್ಣಾನದಿಗೆ ನೀರು ಬಿಡಲಾಗುತ್ತದೆ ಎಂದು ಕೆಬಿಜೆಎನ್ಎಲ್ ಮೂಲಗಳಿಂದ ತಿಳಿದುಬಂದಿದೆ.

ಗರಿಷ್ಠ ಮಟ್ಟದಲ್ಲಿ ಇಂದು 492.23 ಮೀಟರಗೆ ನೀರಿದ್ದು, 33.22 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಗೊಂಡಿದೆ. ಒಳಹರಿವು 15 ಸಾವಿರ ಕ್ಯುಸೆಕ್‌ ಎಂದು ತಿಳಿದು ಬಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.