ADVERTISEMENT

ಶಹಾಪುರ | ಕೋರ್ಟ್ ಬಳಿ ಬೀದಿದೀಪ ಅಳವಡಿಸಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 15:40 IST
Last Updated 21 ಫೆಬ್ರುವರಿ 2024, 15:40 IST

ಶಹಾಪುರ: ನಗರದ ಕೋರ್ಟ್ ಎದುರು ಬೀದಿ ದೀಪ ಇಲ್ಲ. ಕೋರ್ಟ್‌ನಲ್ಲಿ ಕೆಲಸ ನಿರ್ವಹಿಸುವ ಮಹಿಳಾ ಸಿಬ್ಬಂದಿ ಹಾಗೂ ಮಹಿಳಾ ವಕೀಲರು ರಾತ್ರಿ ವೇಳೆ ರಸ್ತೆಯಲ್ಲಿ ತೆರಳುವುದು ಕಷ್ಟವಾಗಿದೆ. ಸಾಕಷ್ಟು ಬಾರಿ ನಗರಸಭೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಬೀದಿ ದೀಪ ಅಳವಡಿಸುವಲ್ಲಿ ವಿಫಲರಾಗಿದ್ದಾರೆ.

ಕೋರ್ಟ್ ಎದುರಿನ ಜಾಗದಲ್ಲಿ ಜಾಲಿಗಿಡ ಬೆಳೆದು ನಿಂತಿವೆ. ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಾರೆ. ವಿಷ ಜಂತುಗಳ ಆಶ್ರಯ ತಾಣವು ಆಗಿದೆ. ನಗರಸಭೆ ಪೌರಾಯುಕ್ತರು ಗಮನಹರಿಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.

-ಆಯಿಷ್ ಪರ್ವೀನ್ ಜಮಖಂಡಿ, ಉಮೇಶ ಮುಡಬೂಳ, ಹೇಮರಡ್ಡಿ ಕೊಂಗಂಡಿ, ಅಮರೇಶ ಇಟಗಿ,ವಕೀಲರು
ಶಹಾಪುರ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.