ಕಕ್ಕೇರಾ: ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ಬೆಂಗಳೂರಲ್ಲಿ ಪದಗ್ರಹಣ ಮಾಡಿದ್ದು, ಅವರನ್ನು ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಭೇಟಿಯಾಗಿ ಸನ್ಮಾನಿಸಿದರು.
ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲಾಪುರ ಮಾತನಾಡಿ, ‘ವೆಂಕಟಪ್ಪ ನಾಯಕರಿಗೆ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದೆ’ ಎಂದರು.
ಪ್ರಮುಖರಾದ ರಾಜಾ ವೇಣುಗೋಪಾಲನಾಯಕ, ಶಾಂತಗೌಡ ಚನ್ನಪಟ್ಟಣ, ನಿಂಗಯ್ಯ ಬೂದಗುಂಪಿ, ನಿಂಗರಾಜ ಬಾಚಿಮಟ್ಟಿ, ವೆಂಕೋಬ ಸಾಹುಕಾರ್ ಮಂಗಳೂರ, ಬಸಯ್ಯಸ್ವಾಮಿ, ಪರಮಣ್ಣ ಕಮತಿಗಿ, ನಿಂಗಪ್ಪ ನಾಯ್ಕ್, ಸಿಕಂದರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.