ADVERTISEMENT

ಯಾದಗಿರಿ | ಬೆಳ್ಳುಳ್ಳಿ, ಹಸಿ ಶುಂಠಿ ದರ ಮತ್ತೆ ಏರಿಕೆ

ಸೊಪ್ಪುಗಳ ದರ ಯಥಾಸ್ಥಿತಿ, ನಿಂಬೆ ಹಣ್ಣು ದರ ಹೆಚ್ಚಳ

ಬಿ.ಜಿ.ಪ್ರವೀಣಕುಮಾರ
Published 18 ಫೆಬ್ರುವರಿ 2024, 4:31 IST
Last Updated 18 ಫೆಬ್ರುವರಿ 2024, 4:31 IST
ಯಾದಗಿರಿ ನಗರದ ಹತ್ತಿಕುಣಿ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆ ತರಕಾರಿ ಮಾರಾಟ ಮಾಡುತ್ತಿರುವುದು
ಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ
ಯಾದಗಿರಿ ನಗರದ ಹತ್ತಿಕುಣಿ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆ ತರಕಾರಿ ಮಾರಾಟ ಮಾಡುತ್ತಿರುವುದು ಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ   

ಯಾದಗಿರಿ: ಕಳೆದ ಎರಡು ವಾರಕ್ಕೆ ಹೋಲಿಸಿದರೆ ಈ ಬಾರಿ ಕೆಲ ತರಕಾರಿಯಲ್ಲಿ ಏರಿಕೆ, ಇಳಿಕೆ ಕಂಡು ಬಂದಿದೆ.

ಹಸಿ ಮೆಣಸಿನಕಾಯಿ, ಹಾಗಲಕಾಯಿ, ಅವರೆಕಾಯಿ, ತೊಂಡೆಕಾಯಿ, ಬದನೆಕಾಯಿ ಕಳೆದ ಬಾರಿಗಿಂತ ಈ ಬಾರಿ ₹5ರಿಂದ 10 ದರ ಏರಿಕೆಯಾಗಿದೆ.

ನುಗ್ಗೆಕಾಯಿ, ಈರುಳ್ಳಿ, ಈರುಳ್ಳಿ, ಚವಳೆಕಾಯಿ, ಸೌತೆಕಾಯಿ, ಸೋರೆಕಾಯಿ, ಸೋರೆಕಾಯಿ, ತುಪ್ಪದ, ಗೀಚು ಹೀರೇಕಾಯಿ ₹5ರಿಂದ 10 ದರ ಇಳಿಕೆಯಾಗಿದೆ.

ADVERTISEMENT

ಹಸಿ ಶುಂಠಿ ಒಂದು ಕೆಜಿಗೆ ₹160ರಿಂದ 180, ಬೆಳ್ಳುಳ್ಳಿ ₹400ರಿಂದ 420 ಏರಿಕೆಯಾಗಿದ್ದು, ಅತಿ ಹೆಚ್ಚು ದರ ಇರುವ ತರಕಾರಿ ಇದಾಗಿದೆ.

ಬೆಂಡೆಕಾಯಿ, ಆಲೂಗಡ್ಡೆ, ಎಲೆಕೋಸು, ಹೂಕೋಸು, ಗಜ್ಜರಿ, ಮೂಲಂಗಿ, ಬಿಟ್‌ರೂಟ್, ಮೂಲಂಗಿ, ಬಿಟ್‌ರೂಟ್ ಕಳೆದ ಮೂರು ವಾರಗಳಿಂದ ಒಂದೇ ದರವಿದೆ.

ಸಗಟು ದರದಲ್ಲಿ ಸಣ್ಣ ಗಾತ್ರದ ನಿಂಬೆಹಣ್ಣು ₹10ಗೆ ಎರಡು, ಚಿಲ್ಲರೆ ದರದಲ್ಲಿ ₹20ಗೆ ಮೂರು ಮಾರಾಟ ಮಾಡಲಾಗುತ್ತಿದೆ. ಈರುಳ್ಳಿ ಸೊಪ್ಪು ಒಂದು ₹60, ಕರಿಬೇವು ಕೆಜಿಗೆ ₹50 ದರವಿದೆ.

ಸೊಪ್ಪುಗಳ ದರ

ಬೇಸಿಗೆ ಆರಂಭವಾಗಿದ್ದರೂ ಇನ್ನೂ ಸೊಪ್ಪುಗಳ ದರದಲ್ಲಿ ವ್ಯಾತ್ಯಾಸ ಕಂಡುಬಂದಿಲ್ಲ. ಮೆಂತ್ಯೆ, ಸಬ್ಬಸಗಿ ಸೊಪ್ಪು ದೊಡ್ಡ ಕಟ್ಟು ₹10ಗೆ ಒಂದು ₹20 ಗೆ ಮೂರು ಕಟ್ಟು, ಪಾಲಕ್‌, ಪುಂಡಿಪಲ್ಯೆ, ರಾಜಗಿರಿ ಸೊಪ್ಪು ₹5ಗೆ ಒಂದು ಕಟ್ಟು, ಪುದೀನಾ, ಕೋತಂಬರಿ ₹15ಗೆ ಒಂದು ಕಟ್ಟು ಮಾರಾಟ ಮಾಡಲಾಗುತ್ತಿದೆ. 

ತರಕಾರಿ ಬೆಲೆಯಲ್ಲಿ ಏರಿಳಿಕೆಯಾಗಿದ್ದು ಗ್ರಾಹಕರಿಗೆ ಅಷ್ಟೇನು ಭಾರವಾಗಿಲ್ಲ. ಇದರಿಂದ ಕೆಲ ತರಕಾರಿ ಹೊರತುಪಡಿಸಿ ಎಲ್ಲ ತರಕಾರಿ ಕೈಗೆಟುವ ದರದಲ್ಲಿವೆ.
ಚಂದ್ರಕಾಂತ ಬಾಚವಾರ, ತಾಂಡಾ ಗ್ರಾಹಕ
ಕೆಲ ವಾರಗಳಿಂದ ತರಕಾರಿ ಸೊಪ್ಪು ದರದಲ್ಲಿ ಹೆಚ್ಚಿನ ವ್ಯಾತ್ಯಾಸವಾಗಿಲ್ಲ. ಮಾರುಕಟ್ಟೆಗೆ ತರಕಾರಿ ಆವಕ ಕೊರತೆ ಇಲ್ಲ.
ಜಾಕೀರ್‌ ಹುಸೇನ್, ತರಕಾರಿ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.