ಯಾದಗಿರಿ: ಬೇಸಿಗೆ ಆರಂಭವಾಗಿದ್ದು, ತರಕಾರಿ ದರಯಲ್ಲಿ ಏರಿಳಿಕೆ ಕಂಡು ಬರುತ್ತಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಟೊಮೆಟೊ ದರ ಪ್ರತಿ ಕೆಜಿಗೆ ₹5 ಜಾಸ್ತಿಯಾಗಿದೆ. ಹಸಿ ಶುಂಠಿ ಕಳೆದ ವಾರಕ್ಕಿಂತ ಈ ವಾರ ₹20 ಜಾಸ್ತಿಯಾಗಿ ಕೆಜಿಗೆ ₹140ರಿಂದ ₹160ರ ತನಕ ಮಾರಾಟವಾಗುತ್ತಿದೆ. ಬೆಳ್ಳುಳ್ಳಿ ದರವೂ ಮತ್ತಷ್ಟು ಏರಿಕೆ ಕಂಡಿದೆ.
ಇದರ ಜೊತೆಗೆ ಬದನೆಕಾಯಿ, ಬೆಂಡೆಕಾಯಿ, ದೊಣ್ಣೆಮೆಣಸಿನಕಾಯಿ, ಎಲೆಕೋಸು, ಹೂಕೋಸು, ಗಜ್ಜರಿ; ಸೌತೆಕಾಯಿ ದರವು ಕೆಜಿಗೆ ₹10ರಿಂದ ₹20 ಏರಿಕೆಯಾಗಿದೆ.
ಉಳಿದಂತೆ ಮೂಲಂಗಿ, ಸೋರೆಕಾಯಿ, ಬೀಟ್ರೂಟ್, ಹೀರೆಕಾಯಿ, ಹಾಗಲಕಾಯಿ, ಅವರೆಕಾಯಿ, ಬೀನ್ಸ್, ಆಲೂಗಡ್ಡೆ, ಚವಳೆಕಾಯಿ, ತೊಂಡೆಕಾಯಿ ದರವು ಕಳೆದ ವಾರದಂತೆ ಈ ವಾರವೂ ಯಥಾಸ್ಥಿತಿಯಲ್ಲೇ ಮುಂದುವರಿದಿದೆ.
ಕರಿಬೇವು ಒಂದು ಕೆಜಿಗೆ ₹60, ಈರುಳ್ಳಿ ಸೊಪ್ಪು ಕೆಜಿಗೆ ₹50–₹60 ದರವಿದೆ.
ಸೊಪ್ಪುಗಳ ದರ:
ತರಕಾರಿ ದರದಲ್ಲಿ ಏರಿಳಿತವಾದಂತೆ ಸೊಪ್ಪುಗಳ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ದರವೂ ಹೆಚ್ಚಳವಾಗಿಲ್ಲ. ಮೆಂತ್ಯೆ, ಸಬ್ಬಸಗಿ ಸೊಪ್ಪು ದೊಡ್ಡ ಕಟ್ಟು ₹10ಗೆ ಒಂದು ₹20ಗೆ ಮೂರು ಕಟ್ಟು, ಪಾಲಕ್, ಪುಂಡಿಪಲ್ಯೆ, ರಾಜಗಿರಿ ಸೊಪ್ಪು ₹5ಗೆ ಒಂದು ಕಟ್ಟು, ಪುದೀನಾ, ಕೋತಂಬರಿ ₹15–₹20 ಕಟ್ಟು ಮಾರಾಟ ಮಾಡಲಾಗುತ್ತಿದೆ.
ಬೇಸಿಗೆ ಕಾಲದಲ್ಲಿ ತರಕಾರಿ ದರ ಹೆಚ್ಚಳ ಸಾಮಾನ್ಯ. ಅಲ್ಲದೇ ಈ ಬಾರಿ ತುಸು ಬೇಗನೆ ಕೆಲ ತರಕಾರಿ ದರದಲ್ಲಿ ಹೆಚ್ಚಳವಾಗಿದೆಬಸು ಚಿಂತನಹಳ್ಳಿ ತರಕಾರಿ ವ್ಯಾಪಾರಿ
ಕಳೆದ ವಾರದಲ್ಲಿ ತರಕಾರಿ ದರ ಏರಿಕೆಯಾಗಿರಲಿಲ್ಲ. ಈ ವಾರ ತುಸು ಹೆಚ್ಚಾಗಿದ್ದು ಕೆಲ ತರಕಾರಿಗಳು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲಸಂತೋಷಮ್ಮ ಹೊಸಳ್ಳಿ ಗ್ರಾಹಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.