ADVERTISEMENT

ಎಂಥಾ ಮಾತು?: ಡಿ.ಕೆ. ಸುರೇಶ್

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 21:00 IST
Last Updated 26 ಮಾರ್ಚ್ 2024, 21:00 IST
ಡಿ.ಕೆ. ಸುರೇಶ್
ಡಿ.ಕೆ. ಸುರೇಶ್   
ಮುನಿರತ್ನ ಸಿನಿಮಾ ನಿರ್ಮಾಪಕರು. ಅದಕ್ಕಾಗಿ ಸ್ಕ್ರಿಪ್ಟ್ ರೆಡಿ ಮಾಡುತ್ತಿದ್ದಾರೆ. ಸ್ವರ್ಗ ಮತ್ತು ನರಕವನ್ನು ಎಲ್ಲಿ ತೋರಿಸಬೇಕು ಎಂಬುದು ಅವರಿಗೆ ಕರಗತವಾಗಿದೆ. ರಾವಣ ಮತ್ತು ರಾಮನನ್ನು ಏನು ಮಾಡಬೇಕು? ದುರ್ಯೋಧನನ ಪಾತ್ರವನ್ನು ಎಲ್ಲಿ ತರಬೇಕು, ಸೀತೆ ಇಲ್ಲದಿದ್ದರೆ ಎಲ್ಲಿಂದ ತರಬೇಕೆಂಬುದು ಸಹ ಅವರಿಗೆ ಚೆನ್ನಾಗಿ ಗೊತ್ತಿದೆ. ಸಿನಿಮಾ ತೆಗೆಯುವ ಅವರು ಎಲ್ಲವನ್ನೂ ಮಾಡುತ್ತಾರೆ. ಸಿನಿಮಾದಲ್ಲಿ ಎಲ್ಲವನ್ನೂ ತೋರಿಸುವ ಅವರಿಗೆ ಯಾವುದನ್ನು ಎಲ್ಲಿಗೆ ಲಿಂಕ್ ಮಾಡಬೇಕು, ಎಲ್ಲಿ ಕತ್ತರಿಸಿ ಅಂಟಿಸಬೇಕೆಂಬುದು ಚೆನ್ನಾಗಿ ಗೊತ್ತಿದೆ.
– ಡಿ.ಕೆ. ಸುರೇಶ್, ಕಾಂಗ್ರೆಸ್‌ ಅಭ್ಯರ್ಥಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.