ನಾನು ಅನುಭವೀ ರಾಜಕಾರಣಿಯಲ್ಲ. ಆದರೆ ಈ ಸ್ಥಾನದಲ್ಲಿರುವುದರಿಂದ ನನಗೆ ಬೇಕಾದ ಕೆಲಸಗಳನ್ನು ಮಾಡಬಲ್ಲೆ. ನಾನು ಕೃಷ್ಣನ ಭಕ್ತೆ. ಮಥುರಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡದಿದ್ದರೆ ನಾನು ಚುನಾವಣೆಗೆ ಸ್ಪರ್ಧಿಸುತ್ತಿರಲಿಲ್ಲ. ಇಲ್ಲಿ ಸೇವೆ ಮಾಡುವಂತೆ ಕೃಷ್ಣದೇವರು ಬಯಸಿದ್ದಾರೆ. ಆ ಕಾರಣಕ್ಕಾಗಿ ಇಲ್ಲಿದ್ದೇನೆ. ರಾಜಕೀಯಕ್ಕೆ ಧುಮುಕಲು ನನಗೆ ಇಷ್ಟ ಇರಲಿಲ್ಲ. ಅದು ಕೂಡ ದೇವರ ಇಚ್ಛೆ ಎಂದು ನಂಬಿದ್ದೇನೆ. ಮೂರನೇ ಬಾರಿ ಟಿಕೆಟ್ ನೀಡಿರುವುದಕ್ಕೆ ಬಿಜೆಪಿಗೆ ಆಭಾರಿಯಾಗಿದ್ದೇನೆಹೇಮಮಾಲಿನಿ, ಸಂಸದೆ, ಬಿಜೆಪಿ ಅಭ್ಯರ್ಥಿ
ಈ ಬಾರಿಯ ಲೋಕಸಭಾ ಚುನಾವಣೆಯು ದೇಶಕ್ಕೆ ದೊಡ್ಡ ಸವಾಲಾಗಿದೆ. ಇದು ದೇಶದ ಭವಿಷ್ಯವನ್ನು ನಿರ್ಧರಿಸಲಿದೆ. ಸಂವಿಧಾನ ಉಳಿಸಲು ಹಾಗೂ ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದಲೂ ಈ ಚುನಾವಣೆಯು ಮಹತ್ವದ್ದಾಗಿದೆ. ಶಾಸಕರನ್ನು ಖರೀದಿಸುವ ದರೋಡೆಕೋರರು ದೇಶದೊಳಗೆ ಕುಳಿತಿದ್ದಾರೆ. ಅವರು ದೇಶವನ್ನು ದೋಚುತಿದ್ದಾರೆ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ--ಅಶೋಕ್ ಗೆಹಲೋತ್, ಕಾಂಗ್ರೆಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.