ಬಿಜೆಪಿಯವರ ಮನೆ ಹಾಳಾಗ. ಇವರು ಯಾವಾಗಲಾದರೂ ಒಂದು ದಿನ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರಾ? 1925ರಲ್ಲಿ ಆರ್ಎಸ್ಎಸ್ ಆರಂಭವಾಯಿತು. ಅದ್ಯಾರೋ ಹೆಡಗೇವಾರ್, ಗುರೂಜಿ ಅನ್ತಾರಲ್ಲ, ಅವರೇನಾದರೂ ಒಂದು ದಿನ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರಾ? ಭಾರತ ಮಾತೆ ಮಕ್ಕಳು ಅಂತ ಬೇರೆ ಹೇಳಿಕೊಳ್ಳುತ್ತಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ನಾವು (ಕಾಂಗ್ರೆಸ್) ಭಾರತ ಮಾತೆ ಮಕ್ಕಳಲ್ವಾ?–ಸಿದ್ದರಾಮಯ್ಯ, ಮುಖ್ಯಮಂತ್ರಿ
ಕಾಂಗ್ರೆಸ್ನವರ ಮನೆ ಹಾಳಾಗಬೇಕು. ದೇಶದಲ್ಲಿ ಭಯೋತ್ಪಾದಕರ ಹಾವಳಿ ಜೋರಾಗಿದ್ದೇ ಕಾಂಗ್ರೆಸ್ ಮನೆ ಹಾಳರಿಂದ. ಇವರಿಂದಲೇ ಜಮ್ಮು–ಕಾಶ್ಮೀರದಲ್ಲಿ ಗ್ರೆನೇಡ್, ಮಿಸೈಲ್, ಕಲ್ಲು ತೂರಾಟ ಆರಂಭವಾಗಿದ್ದು. ಮೋದಿ ಆಡಳಿತ ಬಂದ ಮೇಲೆ ಭಯೋತ್ಪಾದಕರು ಬಾಲ ಮುದುಡಿ ಕುಳಿತಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಸಿದ ಕಾಂಗ್ರೆಸ್ನವರು ಮನೆಹಾಳರೇ ಅಲ್ಲವೇ?–ಆರ್.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.