ಬಿಜೆಪಿ–ಜೆಡಿಎಸ್ ಹೊಂದಾಣಿಕೆಯು ಅನ್ನ ಹಳಸಿತ್ತು-ನಾಯಿ ಹಸಿದಿತ್ತು ಎನ್ನುವಂತಾಗಿದೆ. ‘ಜಾತ್ಯತೀತ’ ಎಂದು ಹೆಸರಿಟ್ಟುಕೊಂಡು ಬಿಜೆಪಿ ಜೊತೆ ಬೆರೆತಿರುವ ಜೆಡಿಎಸ್ಗೆ ಮಾನ– ಮರ್ಯಾದೆ ಇದೆಯೇ? ಕೇವಲ ಕುಟುಂಬದ ಹಿತಾಸಕ್ತಿಗಾಗಿ ಯಾರ ಜತೆಗೆ ಬೇಕಾದರೂ ಹೋಗಲು ಜೆಡಿಎಸ್ ಸಿದ್ಧವಾಗಿ ಬಿಡುತ್ತದೆ. ಯಾವುದೇ ಸಿದ್ದಾಂತವಿಲ್ಲ, ಜನಪರವಾದ ಬದ್ಧತೆಯೂ ಇಲ್ಲ.
–ಸಿದ್ದರಾಮಯ್ಯ, ಮುಖ್ಯಮಂತ್ರಿ
**
ಭಾರತ್ ಮಾತಾ ಕೀ ಜೈ ಎಂದು ಕಾಂಗ್ರೆಸ್ನವರು ಕೂಗಿದರೆ, ನಾವು ಸ್ವಾಗತಿಸುತ್ತೇವೆ. ಭಾರತ ಮಾತೆಗೂ ಖುಷಿ ಆಗುತ್ತದೆ. ಆದರೆ, ಹೀಗೆ ಘೋಷಣೆ ಕೂಗಲು ಕಾಂಗ್ರೆಸ್ನವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಪ್ಪಣೆ ಕೇಳಬೇಕು. ಇದು ಏನನ್ನು ಬಿಂಬಿಸುತ್ತದೆ?
–ಬಸವರಾಜ ಬೊಮ್ಮಾಯಿ, ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.