ರೈತರ, ಮಹಿಳೆಯರ, ಯುವಕರ ಕಷ್ಟ ಕೇಳಲು ಸಿದ್ಧವಿಲ್ಲದ, ವಿಕೃತ ಕಾಮುಕರನ್ನು ಜತೆಯಲ್ಲಿ ಇಟ್ಟುಕೊಂಡು ಅವರ ಕೃತ್ಯವನ್ನು ಖಂಡಿಸುವ ತಾಕತ್ತಿಲ್ಲದ ‘ಮಹಾಪ್ರಭು’ವನ್ನು ಇಳಿಸುವ ಕಾಲ ಬಂದಿದೆ. ಪ್ರಶ್ನಿಸುವ ಧ್ವನಿ ಅಡಗಿಸುವ ಯತ್ನ ನಡೆಯುತ್ತಿದ್ದರೂ ಅದಕ್ಕೆ ಯಾರೂ ಹೆದರಕೂಡದು. ನನ್ನ ಮುಖ ನೋಡಿ ಮತ ಹಾಕಿ ಎಂದು ಮಹಾಪ್ರಭು ಹೋದಲ್ಲಿ, ಬಂದಲ್ಲಿ ಹೇಳುತ್ತ ಇದ್ದಾರೆ. ಅವರಿಗೆ ಬೇಕಿರುವುದು ಮಾತನಾಡುವವರಲ್ಲ, ಹೊಗಳುಭಟರಷ್ಟೇ. ನಾವು ಆರಿಸಿ ಕಳುಹಿಸಿದ 27 ಮಂದಿ ರಾಜ್ಯದ ಜನರ ಧ್ವನಿಯಾಗಲಿಲ್ಲ.ಮತ್ತೆ ನಾವು ಅದೇ ತಪ್ಪು ಮಾಡಬಾರದು.
–ಪ್ರಕಾಶ್ ರಾಜ್, ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.