ADVERTISEMENT

ಕಾಂಗ್ರೆಸ್ ಚಲಾವಣೆಯಲ್ಲಿ ಇಲ್ಲದ ನೋಟು: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

ಪಿಟಿಐ
Published 3 ಏಪ್ರಿಲ್ 2024, 16:28 IST
Last Updated 3 ಏಪ್ರಿಲ್ 2024, 16:28 IST
<div class="paragraphs"><p>ಹಿಮಂತ ಬಿಸ್ವ ಶರ್ಮಾ</p></div>

ಹಿಮಂತ ಬಿಸ್ವ ಶರ್ಮಾ

   

-ಪಿಟಿಐ ಚಿತ್ರ

ಗುವಾಹಟಿ: ರಾಹುಲ್ ಗಾಂಧಿ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದರೆ ಕಾಂಗ್ರೆಸ್‌ನ ಉಳಿದ ಸದಸ್ಯರೂ ಬಿಜೆಪಿ ಸೇರುತ್ತಾರೆ. ಅವರು ರಾಜ್ಯಕ್ಕೆ ಬಂದು ಪ್ರಚಾರ ಮಾಡಲಿ ಎಂದು ನಾನು ಬಯಸುತ್ತೇನೆ ಎಂದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಬುಧವಾರ ಹೇಳಿದ್ದಾರೆ. 

ADVERTISEMENT

‘ರಾಹುಲ್ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಜನವರಿಯಲ್ಲಿ ಅಸ್ಸಾಂಗೆ ಬಂದಿದ್ದರು. ಅದರ ನಂತರ ಅನೇಕ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರಿದ್ದರು. ಅವರು ಮತ್ತೆ ಬಂದರೆ, ನಾನು ಪ್ರಯತ್ನ ಮಾಡುವುದೇ ಬೇಕಿಲ್ಲ, ಅನೇಕರು ಬಂದು ನಮ್ಮ ಪಕ್ಷ ಸೇರುತ್ತಾರೆ’ ಎಂದು ಹೇಳಿದರು.

ಸಿಲ್ಚಾರ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಹಳೆಯ ನೋಟು ಇದ್ದಂತೆ, ಅದರಿಂದ ಯಾವುದೇ ಪ್ರಯೋಜನವಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವೆ ಹೋಲಿಕೆ ಇರಲು ಸಾಧ್ಯವಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.