ADVERTISEMENT

ಮಾಜಿ ಸಚಿವ ಬಾಬಾ ಸಿದ್ದೀಕಿ ಹತ್ಯೆ: ಕಣ್ಣೀರು ಹಾಕಿದ ಬಾಲಿವುಡ್

ಎನ್‌ಸಿಪಿ ನಾಯಕ, ಮಾಜಿ ಸಚಿವ ಬಾಬಾ ಸಿದ್ದೀಕಿ ಅವರ ಹತ್ಯೆ ಬಾಲಿವುಡ್‌ನಲ್ಲಿ ತಲ್ಲಣ ಮೂಡಿಸಿದೆ. ಇದಕ್ಕೆ ಕಾರಣ ಸಿದ್ದೀಕಿ ಅವರು ಬಾಲಿವುಡ್‌ನೊಂದಿಗೆ ಹೊಂದಿದ್ದ ನಂಟು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2024, 3:11 IST
Last Updated 14 ಅಕ್ಟೋಬರ್ 2024, 3:11 IST
<div class="paragraphs"><p>ಶಿಲ್ಪಾ ಶೆಟ್ಟಿ</p></div>

ಶಿಲ್ಪಾ ಶೆಟ್ಟಿ

   

ಬೆಂಗಳೂರು:  ಎನ್‌ಸಿಪಿ (ಅಜಿತ್‌ ಪವಾರ ಬಣ) ನಾಯಕ, ಮಾಜಿ ಸಚಿವ ಬಾಬಾ ಸಿದ್ದೀಕಿ ಅವರ ಹತ್ಯೆ ಬಾಲಿವುಡ್‌ನಲ್ಲಿ ತಲ್ಲಣ ಮೂಡಿಸಿದೆ. ಇದಕ್ಕೆ ಕಾರಣ ಸಿದ್ದೀಕಿ ಅವರು ಬಾಲಿವುಡ್‌ನೊಂದಿಗೆ ಹೊಂದಿದ್ದ ನಂಟು.

ಹತ್ಯೆಯ ಸುದ್ದಿ ತಿಳಿದು ಅಂತಿಮ ದರ್ಶನ ಪಡೆಯಲು ನಟರಾದ ಸಲ್ಮಾನ್ ಖಾನ್, ಸಂಜಯ್ ದತ್, ಜಹೀರ್ ಇಕ್ಬಾಲ್, ರಿತೇಶ್ ದೇಶಮುಖ್, ನಟಿ ಶಿಲ್ಪಾ ಶೆಟ್ಟಿ, ಉದ್ಯಮಿ ರಾಜ್ ಕುಂದ್ರಾ ಸೇರಿದಂತೆ ಅನೇಕರು ಲೀಲಾವತಿ ಆಸ್ಪತ್ರೆಗೆ ದೌಡಾಯಿಸಿದ್ದರು.

ADVERTISEMENT

ಈ ವೇಳೆ ಸಲ್ಮಾನ್ ಖಾನ್, ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿ ಅವರು ಕಣ್ಣೀರು ಹಾಕಿದ್ದಾರೆ. ಅದರಲ್ಲೂ ಕಾರಿನಲ್ಲಿ ಕುಳಿತು ಶಿಲ್ಪಾ ಶೆಟ್ಟಿ ಅಳುತ್ತಿರುವ ದೃಶ್ಯಗಳು ವ್ಯಾಪಕವಾಗಿ ಹರಿದಾಡುತ್ತಿವೆ.

ನಟರಾದ ಶಾರುಕ್ ಖಾನ್, ಸಲ್ಮಾನ್ ಖಾನ್, ಸಂಜಯ್ ದತ್, ಜಹೀರ್ ಇಕ್ಬಾಲ್, ರಿತೇಶ್ ದೇಶಮುಖ್, ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಹಲವರೊಂದಿಗೆ ಸಿದ್ದೀಕಿ ಉತ್ತಮ ಸಂಬಂಧ ಹೊಂದಿದ್ದರು.

ದಿವಂಗತ ನಟ, ರಾಜಕಾರಣಿ ಸುನಿಲ್ ದತ್ ಮತ್ತು ಅವರ ಮಕ್ಕಳಾದ ಸಂಜಯ್ ದತ್‌, ಪ್ರಿಯಾ ದತ್‌ ಹಾಗೂ ನಮ್ರತಾ ದತ್‌ ಅವರೊಂದಿಗೆ ಸಿದ್ದೀಕಿ ಒಡನಾಟ ಹೊಂದಿದ್ದರು.

ಬಾಬಾ ಸಿದ್ದೀಕಿ ಅವರನ್ನು ಶನಿವಾರ ರಾತ್ರಿ ಅವರ ಮಗನ ಬಳಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಸಹಚರರು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.

ಎರಡು ಬಾರಿ ಕಾರ್ಪೊರೇಟರ್‌, ಮೂರು ಬಾರಿ ಶಾಸಕ (1999, 2004, 2009) ಆಗಿರುವ ಸಿದ್ದೀಕಿ, ಹಿಂದಿನ ಕಾಂಗ್ರೆಸ್‌–ಎನ್‌ಸಿಪಿ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಸಿದ್ದೀಕಿ, ಕಾಂಗ್ರೆಸ್‌ ಮತ್ತು ಮಹಾ ವಿಕಾಸ್‌ ಆಘಾಡಿ ಮೈತ್ರಿಕೂಟವನ್ನು ತೊರೆದು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರ್ಪಡೆಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.