ADVERTISEMENT

Bigg Boss Kannada 11 | ನಾಮಿನೇಷನ್‌ ಟಾಸ್ಕ್‌: ಧನರಾಜ್‌– ಜಗದೀಶ್‌ ವಾಗ್ವಾದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2024, 6:45 IST
Last Updated 2 ಅಕ್ಟೋಬರ್ 2024, 6:45 IST
   

ಬೆಂಗಳೂರು: ಬಿಗ್‌ಬಾಸ್‌ 11 ಮೊದಲ ವಾರದಲ್ಲೇ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಜೋರಾಗಿದೆ. ನಾಮಿನೇಷನ್‌ ವಿಚಾರಕ್ಕೆ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ವಾರ ಮನೆಯ ಬಹುತೇಕ ಸದಸ್ಯರು ನಾಮಿನೇಟ್‌ ಆಗಿದ್ದಾರೆ. 

ಈ ನಾಮಿನೇಷನ್‌ನಿಂದ ಪಾರಾಗಲು ಬಿಗ್ ಬಾಸ್‌ ಡಬ್ಬಿಯೊಂದಕ್ಕೆ ಬೊಗಸೆಯಲ್ಲಿ ಮರಳು ತುಂಬುವ ಟಾಸ್ಕ್‌ ನೀಡಿದ್ದರು. ಈ ವೇಳೆ ನೂಕಾಟ ಮಾಡಿದ್ದಕ್ಕೆ ಧನರಾಜ್‌ ಮತ್ತು ಲಾಯರ್‌ ಜಗದೀಶ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಟಾಸ್ಕ್‌ ವಿಚಾರವಾಗಿ ಧನರಾಜ್‌ ಜಗದೀಶ್‌ ಮೇಲೆ ಕೂಗಾಡಿದ್ದಾರೆ.

ಅಂದಹಾಗೆ ಈ ವಾರ ಗೌತಮಿ ಜಾಧವ್‌, ಶಿಶಿರ್‌, ಉಗ್ರಂ ಮಂಜು, ಯಮುನಾ, ಹಂಸಾ, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಲಾಯರ್‌ ಜಗದೀಶ್‌, ಮಾನಸಾ, ಮೋಕ್ಷಿತಾ ಪೈ ಮನೆಯಿಂದ ಹೊರಹೋಗಲು ನಾಮಿನೇಟ್‌ ಆಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.