ADVERTISEMENT

ಬಿಗ್‌ಬಾಸ್ ವಾರದ ಕಥೆ: ಕಿಚ್ಚನ ಆವಾಜ್‌ಗೆ ಜಗ್ಗುವರೇ ಜಗದೀಶ್..?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2024, 8:06 IST
Last Updated 5 ಅಕ್ಟೋಬರ್ 2024, 8:06 IST
   

ಬೆಂಗಳೂರು: ಬಿಗ್‌ಬಾಸ್ ರಿಯಾಲಿಟಿ ಶೋ ಆರಂಭವಾಗಿ ವಾರ ಕಳೆದಿದ್ದು, ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಯಾರೆಲ್ಲ ಪಾಠ ಹೇಳಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ಸ್ವರ್ಗ– ನರಕ ಪರಿಕಲ್ಪನೆಯೊಂದಿಗೆ ಸೆಪ್ಟೆಂಬರ್ 29ರಂದು ಆರಂಭದವಾದ ಬಿಗ್‌ಬಾಸ್ ಮನೆಯೊಳಗೆ ಒಟ್ಟು 17 ಸ್ಪರ್ಧಿಗಳು ಪ್ರವೇಶಿಸಿದ್ದರು.

ವಾರದ ಆರಂಭದಲ್ಲೇ ಸ್ಪರ್ಧಿಗಳ ನಡುವೆ ಜಟಾಪಟಿ ಶುರುವಾಗಿದ್ದು, ಹಲವು ಕಾರಣಗಳಿಗೆ ಮನೆಯೊಳಗೆ ವಾಗ್ವಾದಗಳು ನಡೆದಿವೆ. ಈ ವಾರ ಲಾಯರ್ ಜಗದೀಶ್‌, ಧನರಾಜ್‌ ಆಚಾರ್‌, ಚೈತ್ರಾ ಕುಂದಾಪುರ, ಮಾನಸ ಸಂತೋಷ್ ಹೆಚ್ಚು ಗಮನ ಸೆಳೆದಿದ್ದರು. ಮೋಕ್ಷಿತಾ ಪೈ, ಹಂಸಾ, ಗೋಲ್ಡ್ ಸುರೇಶ್‌ ಮನೆಯೊಳಗೆ ಸಪ್ಪೆಯಾದಂತೆ ಕಾಣುತ್ತಿದ್ದರು.

ADVERTISEMENT

ಈ ನಡುವೆ, ಬಿಗ್‌ಬಾಸ್ ಬಂಡವಾಳ ಬಿಚ್ಚಿಡುತ್ತೇನೆ ಎಂದು ಗುಡುಗಿದ್ದ, ಮನೆಯ ಎಲ್ಲ ಸದಸ್ಯರೊಂದಿಗೂ ಜಗಳವಾಡಿದ್ದ ಲಾಯರ್ ಜಗದೀಶ್‌, ತಮ್ಮ ವರ್ತನೆಗೆ ಮನೆ ಸದಸ್ಯರ ಬಳಿ ಕ್ಷಮೆಯಾಚಿಸಿದ್ದಾರೆ.

ಈ ವಾರ ಗೌತಮಿ ಜಾದವ್, ಶಿಶಿರ್ ಶಾಸ್ತ್ರಿ, ಯುಮುನಾ ಶ್ರೀನಿಧಿ, ಹಂಸಾ, ಭವ್ಯ ಗೌಡ, ಲಾಯರ್ ಜಗದೀಶ್‌, ಮಾನಸ, ಚೈತ್ರ ಕುಂದಾಪುರ, ಮೋಕ್ಷಿತಾ ಪೈ ಮನೆಯಿಂದ ಹೊರಹೋಗಲು ನಾಮಿನೇಟ್‌ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.