ADVERTISEMENT

ಬಿಗ್ ಬಾಸ್‌ ಮನೆಯಿಂದ ಔಟ್: ಸುದೀ‍ಪ್, ಸ್ಪರ್ಧಿಗಳ ಕ್ಷಮೆ ಕೇಳಿದ ವಕೀಲ ಜಗದೀಶ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 8:03 IST
Last Updated 18 ಅಕ್ಟೋಬರ್ 2024, 8:03 IST
<div class="paragraphs"><p>ಬಿಗ್ ಬಾಸ್ ಮನೆಯಲ್ಲಿ ಜಗದೀಶ್</p></div>

ಬಿಗ್ ಬಾಸ್ ಮನೆಯಲ್ಲಿ ಜಗದೀಶ್

   

– ಕಲರ್ಸ್ ಕನ್ನಡ ಚಿತ್ರ

ಬೆಂಗಳೂರು: ಮಹಿಳೆಯರನ್ನು ನಿಂದಿಸಿದ ಕಾರಣಕ್ಕೆ ಬಿಗ್ ಬಾಸ್‌ ಕನ್ನಡದ 11ನೇ ಆವೃತ್ತಿಯಿಂದ ಗೇಟ್‌ ಪಾಸ್‌ ಪಡೆದಿರುವ ವಕೀಲ ಕೆ.ಎನ್ ಜಗದೀಶ್ ಕುಮಾರ್, ನಟ ಸುದೀ‍ಪ್ ಹಾಗೂ ಇತರ ಸ್ಪರ್ಧಿಗಳ ಕ್ಷಮೆ ಕೋರಿದ್ದಾರೆ.

ADVERTISEMENT

‘ಅಭಿಮಾನಿಗಳ ಹಾರೈಕೆ ಹಾಗೂ ಆಶೀರ್ವಾದಿಂದ ನನ್ನ ಬಿಗ್ ಬಾಸ್ ಪಯಣ ಯಶಸ್ವಿಯಾಗಿದೆ. ಅಭಿಮಾನಿಗಳ ‍ಪ್ರೀತಿಯ ಬಗ್ಗೆ ವರ್ಣಿಸಲು ಪದಗಳಿಲ್ಲ. ಸುದೀಪ್ ಸರ್, ಬಿಗ್ ಬಾಸ್ ತಂಡಕ್ಕೆ ಧನ್ಯವಾದಗಳು’ ಎಂದು 'ಪ್ರಜಾವಾಣಿ'ಗೆ ‍ಪ್ರತಿಕ್ರಿಯೆ ನೀಡಿದ್ದಾರೆ.

‘ಸುದೀಪ್ ಸರ್ ನನ್ನನ್ನು ಕ್ಷಮಿಸಿ. ನನ್ನ ಕ್ಷಮಾಪಣೆ ಸ್ವೀಕರಿಸಿ. ನಿಮ್ಮ ಮೇಲೆ ನನಗೆ ಪ್ರೀತಿ, ಗೌರವ ಇದೆ. ನಿಮ್ಮ ಸಲಹೆಯಿಂದ ನಾನು ತುಂಬಾ ಕಲಿತೆ. ನೀವು ನನಗೆ ಶಿಕ್ಷಕರ ಸಮಾನ. ನಾನು ಸುದೀಪ್‌ ಅವರಿಗೆ, ಬಿಗ್‌ ಬಾಸ್‌ ತಂಡಕ್ಕೆ ಆಭಾರಿಯಾಗಿರುವೆ’ ಎಂದು ‘ಪ್ರಜಾವಾಣಿ’ಗೆ ಕಳುಹಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.

‘ಬೆಳಿಗ್ಗೆ ಎದ್ದೇಳಲು ಹಾಕುವ ಹಾಡನ್ನು ನಾನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಐಶ್ವರ್ಯಾ ಅವರು ನನ್ನನ್ನು ಕುಣಿಯವಂತೆ ಮಾಡಿದರು. ಅವರಿಗೆ ಧನ್ಯವಾದಗಳು. ರಂಜಿತ್, ಮಾನಸ ಹಾಗೂ ಅಲ್ಲಿರುವ ಎಲ್ಲರೂ ಸಣ್ಣ ವಯಸ್ಸಿನಲ್ಲೇ ಅಧ್ಭುತ ಕಲಾವಿದರು’ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.

ನಾನು ಎಲ್ಲರೊಳಗೊಬ್ಬನಾಗಲು ಪ್ರಯತ್ನಪಟ್ಟೆ. ನಗಲು ಪ್ರಯತ್ನ ಪಟ್ಟೆ. ಈ ನಿಟ್ಟಿನಲ್ಲಿ ನನ್ನಿಂದ ಕೆಲವು ತಪ್ಪುಗಳಾಗಿವೆ. ಯಾವುದು ವೈಯಕ್ತಿಕವಲ್ಲ. ಅದು ಮನೋರಂಜನೆಯ ಒಂದು ಭಾಗವಾಗಿತ್ತಷ್ಟೇ ಎಂದು ಸಂದೇಶದಲ್ಲಿ ಬೇಸರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.